ಗುಜರಾತ್ ಚುನಾವಣೆ: ಮಾಜಿ ಸಚಿವ ಜೈ ನಾರಾಯಣ ವ್ಯಾಸ್ ಬಿಜೆಪಿಗೆ ರಾಜೀನಾಮೆ!

Prasthutha|

ಗುಜರಾತ್ : ಮುಂಬರುವ ಗುಜರಾತ್ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ, ಮಾಜಿ ರಾಜ್ಯ ಆರೋಗ್ಯ ಸಚಿವ ಜೈ ನಾರಾಯಣ್ ವ್ಯಾಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಇದು ಬಿಜೆಪಿಗೆ ದೊಡ್ಡ ಹಿನ್ನಡೆಯಾಗಿದೆ ಮತ್ತು ಅವರು ಕಾಂಗ್ರೆಸ್ ಸೇರುವ ಸಾಧ್ಯತೆಯಿದೆ.

- Advertisement -

ಕೆಲ ದಿನಗಳ ಹಿಂದಷ್ಟೇ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರನ್ನೂ ವ್ಯಾಸ್ ಭೇಟಿಯಾಗಿದ್ದರು. ಬಿಜೆಪಿ ತ್ಯಜಿಸಿದ ಬೆನ್ನಲ್ಲೇ ನರ್ಮದಾ ಕಾಲುವೆಯ ಗರಿಷ್ಠ ಉಪಯೋಗ ಮಾಡಿಕೊಳ್ಳುತ್ತಿರುವ ರಾಜಸ್ಥಾನದ ಸರ್ಕಾರವನ್ನು ಹೊಗಳುವ ಮೂಲಕ ಕಾಂಗ್ರೆಸ್ ಪರವಾಗಿ ಮಾತನಾಡಿದ್ದಾರೆ. ಆದರೆ ಅವರ ಈ ಮಾತಿನ ಹಿಂದಿನ ತಾತ್ಪರ್ಯದ ಬಗ್ಗೆ ತಿಳಿದು ಬಂದಿಲ್ಲ.

ಜೈ ನಾರಾಯಣ್ ವ್ಯಾಸ್ 2007 ರಲ್ಲಿ ಗುಜರಾತ್ ವಿಧಾನಸಭೆಗೆ ಆಯ್ಕೆಯಾಗಿ ನರೇಂದ್ರ ಮೋದಿ ನೇತೃತ್ವದ ರಾಜ್ಯ ಸರ್ಕಾರದಲ್ಲಿ ಕ್ಯಾಬಿನೆಟ್ ಸಚಿವರಾದರು. ಅವರು 2007 ರಿಂದ 2021 ರವರೆಗೆ ಗುಜರಾತ್ ಸರ್ಕಾರದಲ್ಲಿ ಸಚಿವರಾಗಿದ್ದರು.

Join Whatsapp