ಗುಜರಾತ್ ಚುನಾವಣೆ: ಬಿಜೆಪಿಯ ಮಾಜಿ ಸಚಿವ ಜಯನಾರಾಯಣ ವ್ಯಾಸ್ ಕಾಂಗ್ರೆಸ್ ಸೇರ್ಪಡೆ

Prasthutha|

ಅಹಮದಾಬಾದ್: ಬಿಜೆಪಿಯ ಮಾಜಿ ಸಚಿವ ಜಯನಾರಾಯಣ ವ್ಯಾಸ್ ಅವರು ಸೋಮವಾರ ಬಿಜೆಪಿ ತೊರೆದು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಸಮ್ಮುಖದಲ್ಲಿ ಪಕ್ಷ ಸೇರಿದ್ದಾರೆ.

- Advertisement -

ಇದಕ್ಕೂ ಮುನ್ನ ಮಾತನಾಡಿದ ಖರ್ಗೆ, 70 ವರ್ಷಗಳಲ್ಲಿ ಕಾಂಗ್ರೆಸ್ ಪಕ್ಷ ಏನು ಮಾಡಿದೆ ಎಂದು ಬಿಜೆಪಿ ಅದರಲ್ಲೂ ವಿಶೇಷವಾಗಿ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಪ್ರಶ್ನಿಸುತ್ತಾರೆ. ಈ ಅವಧಿಯಲ್ಲಿ ನಾವು ಏನನ್ನೂ ಮಾಡದಿದ್ದರೆ ದೇಶದಲ್ಲಿ ಪ್ರಜಾಪ್ರಭುತ್ವ ಇರುತ್ತಿರಲಿಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.

ಪ್ರಧಾನಿ ಮೋದಿ ಅವರು ತನ್ನನ್ನು ಬಡವನೆಂದು ಬಿಂಬಿಸುತ್ತಾರೆ. ನಾನು ಕೂಡ ಬಡತನದಲ್ಲೇ ಬೆಳೆದವನು. ಅದರಲ್ಲೂ ನಾನೊಬ್ಬ ಅಸ್ಪೃಶ್ಯರಲ್ಲಿ ಒಬ್ಬನಾಗಿದ್ದೇನೆ. ನಿಮ್ಮಿಂದ ಚಹಾವನ್ನು ಕುಡಿಯುತ್ತಾರೆ. ನನ್ನಿಂದ ಯಾರೂ ಕೂಡ ಚಹಾವನ್ನು ಕುಡಿಯುತ್ತಿರಲಿಲ್ಲ ಎಂದು ತಿರುಗೇಟು ನೀಡಿದರು.

Join Whatsapp