ಗ್ಯಾರಂಟಿ ಯೋಜನೆ ಬಂದ್ ಹೇಳಿಕೆ: ಉಲ್ಟಾ ಹೊಡೆದ​ ಶಾಸಕ

Prasthutha|

ಬೆಂಗಳೂರು: ಸಂಸತ್ ಚುನಾವಣೆಯಲ್ಲಿ ಹಿನ್ನಡೆಯಾದರೆ ಗ್ಯಾರೆಂಟಿ ಸ್ಥಗಿತ ಎಂಬ ತಮ್ಮ ಹೇಳಿಕೆಗೆ ಮಾಗಡಿ ಶಾಸಕ ಎಚ್.ಸಿ ಬಾಲಕೃಷ್ಣ ಸ್ಪಷ್ಟನೆ ನೀಡಿದ್ದಾರೆ. ಗ್ಯಾರಂಟಿಗಳನ್ನು ಐದಲ್ಲ ಹತ್ತು ವರ್ಷ ಮುಂದುವರೆಸುತ್ತೇವೆ ಎಂದಿದ್ದಾರೆ.

- Advertisement -

ಸಿಎಂ ಸಿದ್ದರಾಮಯ್ಯ ಅವರು ಆರ್ಥಿಕ ಸಂಕಷ್ಟದ ನಡುವೆಯೂ ಗ್ಯಾರೆಂಟಿಗಳನ್ನ ಜಾರಿ ಮಾಡಿದ್ದಾರೆ. ಲೋಕಸಭೆಯಲ್ಲಿ ಹಿನ್ನಡೆಯಾದರೆ ಅದೇ ಹಣವನ್ನ ಅಭಿವೃದ್ದಿಗೆ ನೀಡಿ ಅಂತ ಹೇಳಿದ್ದೇನೆ. ಗ್ಯಾರಂಟಿಗಳನ್ನು ಐದಲ್ಲ ಹತ್ತು ವರ್ಷ ಮುಂದುವರೆಸುತ್ತೇವೆ ಎಂದ ಶಾಸಕ ಬಾಲಕೃಷ್ಞ, ಆದರೆ ಲೋಕಸಭಾ ಚುನಾವಣೆಯಲ್ಲಿ ಜನ ಶಕ್ತಿ ತುಂಬಬೇಕಲ್ವಾ? ಮಂತ್ರಾಕ್ಷತೆಗೆ ಮತ ಹಾಕ್ತಿರೋ, ಗ್ಯಾರೆಂಟಿಗಳಿಗೆ ಹಾಕ್ತಿರೋ ನೀವೆ ತೀರ್ಮಾನ ಅಂತ ಹೇಳಿದ್ದೇನೆ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ.

ಮಂತ್ರಾಕ್ಷತೆ ಬಿಟ್ಟು ಅಭಿವೃದ್ದಿ ವಿಚಾರಕ್ಕೆ ಬನ್ನಿ. ನಾನೊಬ್ಬ ಹಿಂದೂ, ಕಾಲಭೈರವನ‌ ತಿಲಕ ಇಟ್ಟು ಹೊರಬರೋದು. ಇದೆಲ್ಲಾ ಬಿಟ್ಟು ಜನರ ಬದುಕನ್ನ ಕಟ್ಟಿಕೊಡುವ ಕೆಲಸ ಮಾಡೋಣಾ ಎಂದು ಕರೆ ನೀಡಿದರು.

Join Whatsapp