ಚಿರತೆಯೊಂದಿಗೆ ಹೋರಾಡಿ ತನ್ನ ಮಗನನ್ನು ರಕ್ಷಿಸಿದ ಮಹಾ ತಾಯಿ !

Prasthutha|

ಭೋಪಾಲ:  ಚಿರತೆಯ ಬಾಯಿಗೆ ತುತ್ತಾಗಿದ್ದ ತನ್ನ ಮಗನನ್ನು ತಾಯಿಯೊಬ್ಬಳು ಏಕಾಂಗಿಯಾಗಿ ಹೋರಾಡಿ ತನ್ನ ಮಗನನ್ನು ಸಾಹಸಮಯ ರೀತಿಯಲ್ಲಿ ರಕ್ಷಿಸಿದ  ಘಟನೆ ಮಧ್ಯಪ್ರದೇಶ ಸಿಧಿ ಜಿಲ್ಲೆಯ ಸಂಜಯ್‌ ಗಾಂಧಿ ರಾಷ್ಟ್ರೀಯ ಉದ್ಯಾನವನದ ಬಳಿ ನಡೆದಿದೆ.

- Advertisement -

ಬುಡಕಟ್ಟು ಮಹಿಳೆ ಕಿರಣ, ಭಾನುವಾರ ರಾತ್ರಿ ತನ್ನ ಮೂರು ಮಕ್ಕಳೊಂದಿಗೆ ಮನೆಯ ಹೊರಗೆ ಬೆಂಕಿಯಿಂದ ಚಳಿ ಕಾಯಿಸುತ್ತಾ ಕುಳಿತಿದ್ದಳು, ಈ ಸಂದರ್ಭ ಎಗರಿದ ಚಿರತೆ 6 ವರ್ಷದ ಬಾಲಕ ರಾಹುಲ್‌ ನನ್ನು ಹೊತ್ತೊಯ್ದಿದೆ. ಕೂಡಲೇ ಎಚ್ಚೆತುಕೊಂಡ ಕಿರಣ, ಇಬ್ಬರು ಮಕ್ಕಳನ್ನು ಮನೆಯೊಳಗೆ ಕಳುಹಿಸಿ ಚಿರತೆಯನ್ನು ಬೆನ್ನತ್ತಿ  ಓಡಿದ್ದಾರೆ.

ಬಳಿಕ ಚಿರತೆಯೊಂದಿಗೆ ಹೋರಾಡಿ ಮಗನನ್ನು ಸಾವಿನ ದವಡೆಯಿಂದ ರಕ್ಷಿಸಿ, ಮನೆಗೆ ಕರೆತಂದಿದ್ದಾರೆ.

- Advertisement -

ಘಟನೆಯಲ್ಲಿ ತಾಯಿ ಹಾಗೂ ಮಗನಿಗೆ ಗಾಯವಾಗಿದ್ದು, ಚಿಕಿತ್ಸೆ ನೀಡಲಾಗಿದೆ.

ಕಿರಣ ಅವರ ಸಾಹಸಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.

Join Whatsapp