ಹಾಲು ಉತ್ಪಾದಕರಿಗೆ ಸಿಹಿ ಸುದ್ದಿ; ಪ್ರತೀ ಲೀಟರ್‌ಗೆ ₹ 30: ಎಚ್.ಡಿ.ರೇವಣ್ಣ

Prasthutha|

ಹಾಸನ: ಗಣೇಶ ಹಬ್ಬದ ಉಡುಗೊರೆಯಾಗಿ ಒಕ್ಕೂಟದ ವ್ಯಾಪ್ತಿಯ ಹಾಲು ಉತ್ಪಾದಕರಿಗೆ ಪ್ರತೀ ಲೀಟರ್‌ಗೆ ₹ 30 ದರ ನೀಡಲು ಒಪ್ಪಿಗೆ ನೀಡಲಾಗಿದ್ದು, ಸೆಪ್ಟೆಂಬರ್1 ರಿಂದ ಜಾರಿಗೆ ಬರಲಿದೆ ಎಂದು ಹಾಸನ ಹಾಲು ಒಕ್ಕೂಟದ ಅಧ್ಯಕ್ಷ, ಶಾಸಕ ಎಚ್.ಡಿ.ರೇವಣ್ಣ ತಿಳಿಸಿದ್ದಾರೆ.

- Advertisement -


ಹಾಸನ ಹಾಲು ಒಕ್ಕೂಟದ ವಾರ್ಷಿಕ‌ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ವರ್ಷ ₹ 2 ಸಾವಿರ ಕೋಟಿ ವಹಿವಾಟು ನಡೆಸುವ ಗುರಿ‌ ಇದ್ದು, ಈಗಾಗಲೇ ಒಕ್ಕೂಟ ₹ 20 ಕೋಟಿ ಲಾಭ ಗಳಿಸಿದೆ. ₹ 560 ಕೋಟಿ ವೆಚ್ಚದಲ್ಲಿ‌ ಮೆಗಾ ಡೈರಿಯ ಕಾಮಗಾರಿ ಆರಂಭಿಸಿದ್ದು, 2023 ರ ಡಿಸೆಂಬರ್‌ಗೆ ಪೂರ್ಣವಾಗಲಿದೆ ಎಂದು ತಿಳಿಸಿದರು.


ಹಸು ಖರೀದಿಗೆ ₹ 100 ಕೋಟಿ ಸಾಲ ನೀಡುವ ಯೋಜನೆಗೆ ಒಪ್ಪಿಗೆ ನೀಡಿದ್ದು, ಅರ್ಹ ಫಲಾನುಭವಿಗಳಿಗೆ ಸಾಲದ ಚೆಕ್ ವಿತರಣೆ ಮಾಡಲಾಗಿದೆ. ಇದು ಸಾಲ ಮನ್ನಾ ಅಲ್ಲ, ಸಾಲ ಮರುಪಾವತಿ ಮಾಡಬೇಕು. ಕಳೆದ‌ ಆರ್ಥಿಕ ವರ್ಷದಲ್ಲಿ‌ ಒಕ್ಕೂಟವು ₹ 1,700 ಕೋಟಿ ವಹಿವಾಟು ನಡೆಸಲಾಗಿದ್ದು, ₹ 22.50 ಕೋಟಿ ನಿವ್ವಳ ಲಾಭ ಗಳಿಸಿದೆ. ₹ 3.6 ಕೋಟಿಯನ್ನು ಹಾಲು ಉತ್ಪಾದಕ ಸಂಘಗಳಿಗೆ ಬೋನಸ್ ನೀಡಲಾಗುವುದು ಎಂದು ಹೇಳಿದರು.



Join Whatsapp