ಗೋಡ್ಸೆ ಬ್ಯಾನರ್: ಮುಖ್ಯಮಂತ್ರಿಗಳೇ ನಿಮ್ಮ ಭಕ್ತಿ ಯಾರಿಗೆ ಎಂದು ಪ್ರಶ್ನಿಸಿದ ಕಾಂಗ್ರೆಸ್

Prasthutha|

ಬೆಂಗಳೂರು: ಸಾವರ್ಕರ್ ಭಾವಚಿತ್ರ ಬಳಿಕ ರಾಜ್ಯಾದ್ಯಂತ ಅಲ್ಲಲ್ಲಿ ಗಾಂಧಿ ಹಂತಕ ಗೋಡ್ಸೆ ಬ್ಯಾನರ್ ತಲೆಯೆತ್ತಿದೆ. ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಟ್ವೀಟ್ ಮೂಲಕ ಕಾಲೆಳೆದ ಕಾಂಗ್ರೆಸ್ , ಬೊಮ್ಮಾಯಿಯವರೇ ನಿಮ್ಮ ಭಕ್ತಿ ಯಾರಿಗೆ, ಗಾಂಧಿಗೋ,ಗೋಡ್ಸೆಗೋ ಎಂದು ಪ್ರಶ್ನಿಸಿದೆ.

- Advertisement -

ಕೃಷ್ಣ ಜನ್ಮಾಷ್ಟಮಿಗೆ ಶುಭಕೋರುವ ನೆಪದಲ್ಲಿ, ಸ್ವಾತಂತ್ರ್ಯ ಹೋರಾಟಗಾರರ ಫ್ಲೆಕ್ಸ್ ನಲ್ಲಿ ನಾಥೂರಾಮ್ ಗೋಡ್ಸೆಯ ಭಾವಚಿತ್ರವನ್ನು ಕಿಡಿಕೇಡಿಗಳು ಪ್ರಕಟಿಸಿದ್ದಾರೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್ ಗೃಹ ಇಲಾಖೆಯ ವೈಫಲ್ಯತೆಯನ್ನು ಬೊಟ್ಟು ಮಾಡಿದೆ.

ಈ ಬಗ್ಗೆ ಟ್ವೀಟ್ ಮಾಡಿದ ಕಾಂಗ್ರೆಸ್, ಮುಖ್ಯಮಂತ್ರಿಗಳೇ,
ತಾವು RSSಗೆ ತಲೆಬಾಗಿರುವ ಪರಿಣಾಮ ಎಲ್ಲೆಡೆ ಗೋಡ್ಸೆ ಫೋಟೋಗಳು ರಾರಾಜಿಸುತ್ತಿವೆಯೇ, ದೇಶದ ಮೊದಲ ಭಯೋತ್ಪಾದಕ ಗೋಡ್ಸೆ ಫೋಟೋವನ್ನ ಹಾಕುತ್ತಿರುವುದನ್ನು ತಡೆಯದೆ ಇರುವುದೇಕೆ ಗೃಹ ಇಲಾಖೆ,
ಶಾಂತಿ ಕದಡುವ ಉದ್ದೇಶದ ಈ ಕುಕೃತ್ಯಕ್ಕೆ ಕಡಿವಾಣ ಹಾಕದಿರುವುದೇಕೆ ಎಂದು ಪ್ರಶ್ನಿಸಿದೆ

- Advertisement -

ಕೊನೆಗೆ ನಿಮ್ಮ ಭಕ್ತಿ ಗಾಂಧಿಗೋ, ಗೋಡ್ಸೆಗೋ? ಸ್ಪಷ್ಟವಾಗಿ ಬಹಿರಂಗಪಡಿಸಿ ಎಂದು ಸವಾಲು ಹಾಕಿದೆ.

Join Whatsapp