ಗೋವಾ ಬೆಳವಣಿಗೆ: ‘ಆಪರೇಷನ್ ಕೆಸರು’ ಎಂದ ಕಾಂಗ್ರೆಸ್

Prasthutha|

ನವದೆಹಲಿ: ಇಂದು ಗೋವಾದಲ್ಲಿ ಎಂಟು ಶಾಸಕರು ಬಿಜೆಪಿಗೆ ಸೇರ್ಪಡೆಯು ‘ಆಪರೇಷನ್ ಕೆಸರು’ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.

- Advertisement -


ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, ‘ಭಾರತ್ ಜೋಡೊ ಯಾತ್ರೆಯ ಯಶಸ್ಸು ಗೋಚರವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಗೋವಾದಲ್ಲಿ ಆಪರೇಷನ್ ಕೆಸರನ್ನು ವೇಗವಾಗಿ ಅನುಷ್ಠಾನಗೊಳಿಸಲಾಗಿದೆ’ ಎಂದು ಆರೋಪಿಸಿದ್ದಾರೆ.

‘ಬಿಜೆಪಿ ಆತಂಕದಲ್ಲಿದೆ. ಯಾತ್ರೆಯನ್ನು ದುರ್ಬಲಗೊಳಿಸಲು ತಪ್ಪು ಮಾಹಿತಿಯನ್ನು ಹರಡಲಾಗುತ್ತಿದೆ. ನಾವು ನಿರಾತಂಕವಾಗಿ ಇದ್ದೇವೆ. ಬಿಜೆಪಿಯ ಈ ಕೊಳಕು ತಂತ್ರಗಳ ವಿರುದ್ಧ ನಾವು ಜಯ ಸಾಧಿಸುತ್ತೇವೆ’ ಎಂದು ಹೇಳಿದರು.

Join Whatsapp