ಬಿಜೆಪಿಯ ಗೆಲುವಿನಲ್ಲಿ ಈ ಇಬ್ಬರ ಕೊಡುಗೆಗೆ ಪದ್ಮವಿಭೂಷಣ ನೀಡಿ: ಶಿವಸೇನೆ ವ್ಯಂಗ್ಯ

Prasthutha|

ಹೊಸದಿಲ್ಲಿ: ಪಂಚರಾಜ್ಯ ಚುನಾವಣೆಯ ಫಲಿತಾಂಶಗಳ ಪೈಕಿ ನಾಲ್ಕು ರಾಜ್ಯಗಳಲ್ಲಿ ಬಿಜೆಪಿಯು ಗೆಲುವನ್ನು ಸಾಧಿಸಿದೆ. ಅಲ್ಲದೇ ಉತ್ತರ ಪ್ರದೇಶದಲ್ಲಿ ದಾಖಲೆಯ ಗೆಲುವನ್ನು ಕಂಡಿದ್ದು ಈ ಬಗ್ಗೆ ಶಿವಸೇನೆ ನಾಯಕ ಹಾಗೂ  ಸಂಸದ ಸಂಜಯ್ ರಾವತ್ ಪ್ರತಿಕ್ರಿಯಿಸಿದ್ದಾರೆ. ಬಿಜೆಪಿಯ ಗೆಲುವಿನಲ್ಲಿ ಇಬ್ಬರ ಕೊಡುಗೆ ಇದೆ ಎಂದಿದ್ದು, ಈ ಇಬ್ಬರ  ಕೊಡುಗೆಗಾಗಿ ಅವರಿಗೆ ಪದ್ಮವಿಭೂಷಣ ಅಥವಾ ಭಾರತ ರತ್ನ ನೀಡಬೇಕೆಂದು ರಾವತ್ ವ್ಯಂಗ್ಯವಾಡಿದ್ದಾರೆ.

- Advertisement -

ಬಿಜೆಪಿ ಗೆಲುವಲ್ಲಿ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಹಾಗೂ  ಎಐಎಂಐಎಂ ಮುಖ್ಯಸ್ಥ ಸಂಸದ ಅಸದುದ್ದೀನ್ ಉವೈಸಿ ಕೊಡುಗೆ ಇದೆ ಎಂದಿರುವ ರಾವತ್ ಇಬ್ಬರಿಗೂ  ಪದ್ಮವಿಭೂಷಣ ಅಥವಾ ಭಾರತ ರತ್ನ ನೀಡಬೇಕೆಂದು ಹೇಳಿದ್ದಾರೆ.

ಉತ್ತರ ಪ್ರದೇಶದಲ್ಲಿ ಬಿಜೆಪಿಯು ದಾಖಲೆಯ ವಿಜಯವನ್ನು ಕಂಡಿದೆ. ಈ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಸ್ಥಾನಗಳು 42 ರಿಂದ 125 ಕ್ಕೆ ಏರಿಕೆ ಕಂಡಿದೆ. ಬಿಜೆಪಿಯು 279 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದು ಈ ಸಾಧನೆಯು ಮಾಯಾವತಿ ಮತ್ತು ಉವೈಸಿ ಅವರ ಕೊಡುಗೆ ಎಂದು ಸಂಜಯ್ ರಾವತ್ ವಾಗ್ದಾಳಿ ನಡೆಸಿದ್ದಾರೆ.

Join Whatsapp