ಆಡು ಮೇಯಿಸುತ್ತಿದ್ದ ಬಾಲಕಿಯ ಮೇಲೆ ಅತ್ಯಾಚಾರಗೈದು ಕೊಲೆ: ಆರೋಪಿಗೆ ಗಲ್ಲು ಶಿಕ್ಷೆ

Prasthutha|

ಅಜ್ಮೀರ್: ಆಡು ಮೇಯಿಸಲು ತೆರಳಿದ್ದ 11 ವರ್ಷದ ಬಾಲಕಿ ಯನ್ನು ಬಲಾತ್ಕಾರವಾಗಿ ಹೊತ್ತೊಯ್ದು, ಅತ್ಯಾಚಾರ ನಡೆಸಿ ಬಳಿಕ ಕೊಲೆಗೈದ ಪ್ರಕರಣದಲ್ಲಿ ರಾಜಸ್ಥಾನದ ಅಜ್ಮೀರ್’ನ ವಿಶೇಷ ನ್ಯಾಯಾಲಯವು ಅಪರಾಧಿ ಸುರೇಂದ್ರ ಅಲಿಯಾಸ್ ಸಂತು ಎಂಬಾತನಿಗೆ ಗಲ್ಲು ಶಿಕ್ಷೆ ವಿಧಿಸಿದೆ.

- Advertisement -

ಜೂನ್ 21 ರಂದು ಆಡು ಮೇಯಿಸಲು ತೆರಳಿದ್ದ ಬಾಲಕಿಯು ಕಾಣೆಯಾಗಿದ್ದಳು. ಬಳಿಕ ಊರವರ ಹುಡುಕಾಟದಲ್ಲಿ ಬೆಟ್ಟದ ತುದಿಯಲ್ಲಿ ಬಾಲಕಿಯ ಮೃತದೇಹ ಪತ್ತೆಯಾಗಿತ್ತು. ದೇಹದ ತುಂಬಾ ಗಾಯದ ಗುರುತುಗಳು ಇದ್ದ ಕಾರಣ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದರು. ಘಟನೆ ನಡೆದ ಮರುದಿನವೇ ಅಂದರೆ ಜೂನ್ 22 ರಂದು ಸುರೇಂದ್ರನನ್ನು ಪೊಲೀಸರು ಬಂಧಿಸಿದ್ದರು.

ಸೋಮವಾರ ಪ್ರಕರಣದ ತೀರ್ಪು ಪ್ರಕಟಿಸಿದ ವಿಶೇಷ ನ್ಯಾಯಾಲಯದ ನ್ಯಾ.ರತನ್ ಲಾಲ್ ಮೂಂದ್ ಅಪರಾಧಿಗೆ ಗಲ್ಲು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.

- Advertisement -

ಅತ್ಯಾಚಾರಿಗಳಿಗೆ ರಾಜಸ್ಥಾನದಲ್ಲಿ ಗಲ್ಲು ಶಿಕ್ಷೆ ವಿಧಿಸುತ್ತಿರುವುದು ಇದು ಮೊದಲೇನಲ್ಲ.

ರಾಜಸ್ಥಾನದ ನಾಗೂರ್ ಜಿಲ್ಲೆಯಲ್ಲಿ ಏಳು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿದ್ದ 26 ವರ್ಷದ ದಿನೇಶ್ ಜಾಟ್ ಎಂಬಾತನಿಗೆ ಕಳೆದ ಅಕ್ಟೋಬರ್ 22 ರಂದು ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿತ್ತು.

ಇನ್ನೊಂದು ಘಟನೆಯಲ್ಲಿ 9 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ್ದ ದುರಳನನ್ನು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬಂಧಿಸಿದ್ದ ಪೊಲೀಸರು 18 ಗಂಟೆಯೊಳಗೆ ತನಿಖೆಯನ್ನು ಪೂರ್ತಿಗೊಳಿಸಿದ್ದರು. ಅಕ್ಟೋಬರ್ 5ರಂದು ಜೈಪುರದ ನ್ಯಾಯಾಲಯ ಅಪರಾಧಿಗೆ 20 ವರ್ಷಗಳ ಜೈಲು ಶಿಕ್ಷೆ ಹಾಗೂ 2 ಲಕ್ಷ ರೂಪಾಯಿ ದಂಡ ವಿಧಿಸಿತ್ತು.

Join Whatsapp