ಕಲುಷಿತ ನೀರು ಸೇವನೆ: ವಾಂತಿ ಭೇದಿಯಿಂದ ಬಾಲಕಿ ಸಾವು

Prasthutha|

ಬಳ್ಳಾರಿ: ಬಾಲಕಿಯೋರ್ವಳು ಕಲುಷಿತ ನೀರು ಕುಡಿದು ಅಸ್ವಸ್ಥಗೊಂಡು ಮೃತಪಟ್ಟಿರುವ ಘಟನೆ ಗೋನಾಳ್ ಗ್ರಾಮದಲ್ಲಿ ನಡೆದಿದೆ.

- Advertisement -


ಗೋನಾಳ್ ಗ್ರಾಮದ ಸುಕನ್ಯ(11) ಮೃತ ಬಾಲಕಿ.

ಸುಕನ್ಯ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಕಂಪ್ಲಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗುತ್ತಿರುವಾಗ ದಾರಿ ಮಧ್ಯೆ ಮೃತ ಪಟ್ಟಿದ್ದಾಳೆ ಎಂದು ತಿಳಿದು ಬಂದಿದೆ.

- Advertisement -

ನಲ್ಲಿಯಲ್ಲಿ ಬಂದ ಕಲುಷಿತ ನೀರು ಕುಡಿದು ಕಂಪ್ಲಿ ತಾಲೂಕಿನ ಗೋನಾಳ್ ಗ್ರಾಮದ 20ಕ್ಕೂ ಹೆಚ್ಚು ಜನರು ವಾಂತಿ ಬೇಧಿಯಿಂದ ಅಸ್ವಸ್ಥರಾಗಿದ್ದು, ಶಾಲೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ.


ಕಲುಷಿತ ನೀರು ಕುಡಿದು ಬಾಲಕಿ ಮೃತ ಪಟ್ಡಿರುವದರಿಂದ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.

Join Whatsapp