ಗಂಗೂಲಿ ಟ್ವೀಟ್ ಸ್ಪಷ್ಟನೆ : ರಾಜಕೀಯ ಅಖಾಡಕ್ಕೆ ಎಂಟ್ರಿಯಲ್ಲ ಎಂದ ಬಿಸಿಸಿಐ ಅಧ್ಯಕ್ಷ.

Prasthutha|

ನವದೆಹಲಿ: ಮಾಜಿ ಕ್ರಿಕೆಟಿಗ ಮತ್ತು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಯು ಬುಧವಾರ ಅಡ್ಡಗೋಡೆಯ ಮೇಲೆ ದೀಪ ಇಟ್ಟಂತಹ ಟ್ವೀಟೋಂದು ದೇಶದಾದ್ಯಂತ ಸುದ್ದಿಯಾಗಿತ್ತು. ಆ ಮೂಲಕ ರಾಜಕೀಯಕ್ಕೂ ಎಂಟ್ರಿಯಾಗುತ್ತಾರೆ ಎಂಬ ಮಾತು ಕೇಳಿಬಂದಿದ್ದು ಗಂಗೂಲಿ ಅದನ್ನು ಅಲ್ಲಗಳೆದಿದ್ದಾರೆ.

- Advertisement -

ಬಹಳಷ್ಟು ಜನರಿಗೆ ಸಹಾಯ ಆಗುತ್ತದೆ ಎಂದು ನಾನು ಭಾವಿಸುವ ಏನನ್ನಾನದರೂ ಪ್ರಾರಂಭಿಸುತ್ತೇನೆ ಎಂಬುವುಕ್ಕೆ ಸ್ವತಃ ಗಂಗೂಲಿಯೇ ಸ್ಪಷ್ಟೀಕರಣ ನೀಡಿದ್ದು ಅದು ರಾಜಕೀಯ ಪ್ರವೇಶದ ಬಗ್ಗೆ ಅಲ್ಲ ಎಂದಿದ್ದಾರೆ.

“ನನ್ನ ಹೊಸ ಉದ್ಯಮ ಎಜುಕೇಶನ್ ಆಪ್ ಬಗ್ಗೆ ನಾನು‌ ಅದರಲ್ಲಿ ಪ್ರಸ್ತಾಪಿಸಿದ್ದು ಎಂದ ಅವರು ಸದ್ಯ ಭಾರತದಲ್ಲಿ ಹಲವು ಎಜುಕೇಶನಲ್ ಆಪ್ ಇದೆ ಅದಕ್ಕೆ ಪ್ರತಿಸ್ಪರ್ಧಿಯಾಗಿ ಹೊಸ ಶಿಕ್ಷಣ ಆಪ್ ಬಿಡುಗಡೆ ಮಾಡುತ್ತಿದ್ದು, ಆ ಬಗ್ಗೆ ಮಾರ್ಮಿಕವಾಗಿ ಟ್ವೀಟ್ ಮಾಡಿದ್ದೇನೆ ಅಷ್ಟೇ” ಎಂದು ಹೇಳಿದ್ದಾರೆ.

Join Whatsapp