ಗಂಗೊಳ್ಳಿ | ಅವಹೇಳನಕಾರಿ ಘೋಷಣೆ: ಮೂವರ ಬಂಧನ !

Prasthutha|

ಕುಂದಾಪುರ: ಗಂಗೊಳ್ಳಿಯಲ್ಲಿ ಅಕ್ಟೋಬರ್ 1 ರಂದು ನಡೆದ ಗೋಹತ್ಯೆ ವಿರೋಧಿ ಪ್ರತಿಭಟನಾ ಮೆರವಣಿಗೆಯಲ್ಲಿ ಅವಹೇಳನಕಾರಿ ಘೋಷಣೆ ಕೂಗಿದ ಆರೋಪದ ಮೇಲೆ ಹಿಂದೂ ಸಂಘಟನೆಯ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.

- Advertisement -

ನವೀನ್, ಅಂಬರೀಶ್ ಮತ್ತು ಪರ್ವೀಶ್ ಬಂಧಿತ ಆರೋಪಿಗಳು.

ಅಲ್ಲದೆ ಕೋವಿಡ್ ನಿಯಮಾವಳಿ ಉಲ್ಲಂಘಿಸಿ ಪ್ರತಿಭಟನೆಯಲ್ಲಿ ಜನ ಸೇರಿಸಿದ್ದಕ್ಕೆ ಅಕ್ಷಯ್, ವಿವೇಕ್, ರಾಘವೇಂದ್ರ,ಅಕ್ಷಯ್ ಹಾಗೂ ಮಹೇಶ್ ಅವರನ್ನು ಬಂಧಿಸಿದ್ದಾರೆ.

- Advertisement -

ಸೆ. 28 ರಂದು ಅನುಮತಿ ಪಡೆಯದೇ ಸಭೆ ಸೇರಿದ್ದಕ್ಕೆ ಮಜೀದ್, ಇಫ್ತಿಕರ್ ಹಾಗೂ ತಬೀಶ್ ಬಂಧಿಸಲಾಗಿತ್ತು.

ಈ ಸಂಬಂಧ ಮೂರು ಪ್ರತ್ಯೇಕ ಪ್ರಕರಣಗಳು ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, 11 ಮಂದಿ ಸೆರೆಯಾಗಿದ್ದರೆ.

Join Whatsapp