ಗಣೇಶ ಮೂರ್ತಿ ವಿರೂಪಗೊಳಿಸಿದ ಪ್ರಕರಣ: ಐವರು ಹಿಂದುತ್ವ ಕಾರ್ಯಕರ್ತರ ಬಂಧನ

Prasthutha|

ಬೆಂಗಳೂರು: ಗಣೇಶೋತ್ಸವಕ್ಕೆ ಪ್ರತಿಸ್ಠಾಪಿಸಿದ್ದ ಮೂರ್ತಿ ವಿರೂಪಗೊಳಿಸಿ, ಗಣೇಶ ಚತುರ್ಥಿಯ ಫ್ಲೆಕ್ಸ್ ಗಳನ್ನು ಹರಿದು ಹಾಕಿದ ಪ್ರಕರಣದಲ್ಲಿ ಐವರು ಹಿಂದುತ್ವ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.

- Advertisement -

ಬಂಧಿತರನ್ನು ಮಲ್ಲೇಶ್, ಕಾಂತರಾಜು, ಗಿರೀಶ್, ಪುನೀತ್, ಚಂದು ಎಂದು ಗುರುತಿಸಲಾಗಿದೆ.

ಗಣೇಶೋತ್ಸವದ ಪ್ರಯುಕ್ತ ವಿವಿಧ ಸಂಘ ಸಂಸ್ಥೆಗಳು ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಗಳನ್ನು ಈ ದುಷ್ಕರ್ಮಿಗಳು ವಿರೂಪಗೊಳಿಸಿದ್ದು , ಜೊತೆಗೆ ಹಬ್ಬದ ಶುಭಾಶಯಗಳನ್ನು ಕೋರಿ ಹಾಕಲಾಗಿದ್ದ ಫ್ಲೆಕ್ಸ್ ಗಳು ಮತ್ತು ಅಲ್ಲೇ ಸ್ಥಳದಲ್ಲಿ ನಿಲ್ಲಿಸಲಾಗಿದ್ದ ದ್ವಿಚಕ್ರ ವಾಹನದ ಸೀಟುಗಳನ್ನು ಬ್ಲೇಡ್ ನಿಂದ ಕೊಯ್ದು ಹಾಕಿದ್ದರು.

- Advertisement -

ಕುಂಬಾರಪೇಟೆಯಲ್ಲಿ 4, ಬಾಬುರಾವ್ ಬೀದಿಯಲ್ಲಿ 1, ಕುಪ್ಪಶೆಟ್ಟಿ ಬಾವಿ ಬೀದಿ ಬಳಿ 1, ಶ್ರೀಧರ್ಮರಾಯಸ್ವಾಮಿ ದೇವಸ್ಥಾನದ ಬಳಿ 1, ಸಿಪಿ ರಸ್ತೆಯಲ್ಲಿ 1 ಕೆ.ಎಂ.ಅರ್. ಸ್ಟೋರ್ಸ್ ಬಳಿ 1 ಸೇರಿ ಒಟ್ಟು 9ಕಡೆ ಹೀಗೆ ವಿವಿದೆಡೆ ಗಣೇಶ ಮೂರ್ತಿಗಳನ್ನು ವಿರೂಪಗೊಳಿಸಿರುವುದು ವರದಿಯಾಗಿದ್ದು ಘಟನೆಯ ಮಾಹಿತಿ ತಿಳಿದ ಮಾಲೂರು ಪೊಲೀಸರು ಸಿಸಿಟಿವಿ ದೃಶ್ಯ ಆಧಾರದ ಮೇರೆಗೆ ಈ ಐವರನ್ನು ಬಂಧಿಸಿದ್ದಾರೆ.

ಈ ಐವರನ್ನು ವಶಕ್ಕೆ ಪಡೆದು ಠಾಣೆಯಲ್ಲಿ ವಿಚಾರಣೆ ನಡೆಸುತ್ತಿದ್ದಂತೆ ಹಲವರು ಬಂಧಿತರ ಪರ ಠಾಣಾ ಮುಂಭಾಗದಲ್ಲಿ ರಾದ್ದಾಂತ ನಡೆಸಿದ್ದರು ಎನ್ನಲಾಗಿದೆ.

Join Whatsapp