ಗಾಂಧಿ ಕೊಂದವರೇ ಭಯೋತ್ಪಾದಕರು: ಮಾಜಿ‌ ಶಾಸಕ ಕಾಶಪ್ಪನವರ ಕಿಡಿ

Prasthutha|

ಬಾಗಲಕೋಟೆ: ಮಹಾತ್ಮಾ ಗಾಂಧಿ ಕೊಂದ ಸಂಘಟನೆಯ ಸಂತಾನದವರೇ ನಿಜವಾದ ಭಯೋತ್ಪಾದಕರು ಎಂದು ಹುನಗುಂದ ಕ್ಷೇತ್ರದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಕಿಡಿಕಾರಿದ್ದಾರೆ.

- Advertisement -

ಕಾಂಗ್ರೆಸ್‌ ಪಕ್ಷ ಉಗ್ರಗಾಮಿಗಳ ಸಂತಾನ ಎಂಬ ಬಿಜೆಪಿ ಶಾಸಕ ಸಿದ್ದು ಸವದಿ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಾಂ​ಧಿ ಕೊಂದ ನಾತುರಾಮ್‌ ಗೋಡ್ಸೆ ಯಾರು? ವಿಚಾರವಾದಿ, ಹಿರಿಯ ಸಾಹಿತಿ ಎಂ.ಎಂ. ಕಲಬುರ್ಗಿ ಅವರನ್ನು ಹಾಗೂ ಗೌರಿ ಲಂಕೇಶ ಅವರನ್ನು ಕೊಂದವರು ಯಾರು? ಕಾಂಗ್ರೆಸ್‌ ಪಕ್ಷವನ್ನು ಉಗ್ರಗಾಮಿ ಸಂಘಟನೆ ಎಂದ ಶಾಸಕ ಸಿದ್ದು ಸವದಿಯವರಿಗೆ ನಾಚಿಕೆಯಾಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ನಾಯಕರ ಕುರಿತು ಸಹ ಅಸಮಧಾನ ವ್ಯಕ್ತಪಡಿಸಿದ ಕಾಶಪ್ಪನವರ, ಸಿ.ಟಿ.ರವಿ ಸೇರಿದಂತೆ ಕೆಲವರ ಮಾತುಗಳಿಗೆ ಏನು ಹಿಡಿತವಿದೆ. ಎಲ್ಲವನ್ನು ತಿಳಿದವರ ಹಾಗೇ ಮಾತನಾಡುವುದನ್ನು ಮೊದಲು ನಿಲ್ಲಿಸಲಿ ಎಂದಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸಹ ಸಂವಿಧಾನದ ಮೇಲೆ ಪ್ರಮಾಣ ಮಾಡಿ ಮುಖ್ಯಮಂತ್ರಿಯಾದವರು. ಆದರೆ, ಇಂದು ಅವರು ಕೇವಲ ಸಂಘ ಪರಿವಾರದ ತೀರ್ಮಾನಗಳನ್ನೇ ಜಾರಿಗೆ ತರಲು ಹೊರಟಿದ್ದಾರೆ ಇದಕ್ಕೆ ಏನು ಹೇಳಬೇಕು ಎಂದರು.

- Advertisement -

ಮಕ್ಕಳ ತಲೆಯಲ್ಲಿ ಇತಿಹಾಸ ಹೋಗಬೇಕು.ಆದರೆ, ಪಠ್ಯ ಕ್ರಮದ ಪರಿಷ್ಕರಣೆ ಹೆಸರಿನಲ್ಲಿ ನಿಜವಾದ ಇತಿಹಾಸಕಾರರನ್ನು ಮರೆತು ಹೆಗಡೆವಾರ್‌, ಸೂಲಿಬೆಲೆ ಚಕ್ರವರ್ತಿಯಂತವರ ಪಾಠವನ್ನು ಹಾಕಲು ಹೊರಟಿದ್ದಾರೆ. ಇವರೇನು ಹೋರಾಟಗಾರರೇ ಅಥವಾ ಪಂಡಿತರೇ? ಮಾನ ಮಾರ್ಯಾದೆ ಇದ್ದರೇ ಆಗಿರುವ ಪ್ರಮಾದವನ್ನು ಮೊದಲು ಸರಿಪಡಿಸಿಕೊಳ್ಳುವ ಕೆಲಸ ಮಾಡಲಿ ಅಂತ ಹುನಗುಂದ ಕ್ಷೇತ್ರದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ತಿಳಿಸಿದ್ದಾರೆ.

Join Whatsapp