ಮಂಗಳೂರಿನಲ್ಲಿ ಆಗಸ್ಟ್ 10ರಂದು ಪಕ್ಷಾತೀತವಾಗಿ ಸ್ವಾತಂತ್ರ್ಯ ನಡಿಗೆ: ಜೆ.ಆರ್.ಲೋಬೋ

Prasthutha|

ಮಂಗಳೂರು: 75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಬುಧವಾರ ಆಗಸ್ಟ್ 10ರಂದು, ಪಾಂಡೇಶ್ವರದ ನೆಹರೂ ಪ್ರತಿಮೆಯಿಂದ ಗಡಿಯಾರ ಗೋಪುರ, ಪಿವಿಎಸ್ ನಲ್ಲಿರುವ ಗಾಂಧೀಜಿ ಪ್ರತಿಮೆವರೆಗೆ ಪಕ್ಷಾತೀತವಾಗಿ ಸ್ವಾತಂತ್ರ್ಯ ನಡಿಗೆ ಹಮ್ಮಿಕೊಳ್ಳುವುದಾಗಿ ಮಾಜಿ ಶಾಸಕ ಜೆ. ಆರ್. ಲೋಬೋ ತಿಳಿಸಿದರು.

- Advertisement -

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೆಹರೂ ಮತ್ತು ಗಾಂಧೀಜಿ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡುವ ಮೂಲಕ ಅವರ ಸ್ವಾತಂತ್ರ್ಯ ಹೋರಾಟ, ಅವರೊಂದಿಗೆ ಕಾಂಗ್ರೆಸ್ ಸ್ವಾತಂತ್ರ್ಯ ಹೋರಾಟಗಾರರ ಬಲಿದಾನವನ್ನು ನೆನಪಿಸಿ ಈ ನಡಿಗೆ ಹಮ್ಮಿಕೊಳ್ಳಲಾಗಿದೆ. ನೆಹರುರವರು ಒಂಬತ್ತು ಬಾರಿ ಜೈಲಿಗೆ ಹೋಗಿದ್ದರು. ಶಾಸ್ತ್ರಿ, ಪಟೇಲ್, ಜಗಜೀವನರಾಂ, ಮನಮೋಹನ್ ಸಿಂಗ್ ಎಲ್ಲರ ಹೋರಾಟವನ್ನೂ ಸ್ಮರಿಸಲಾಗುವುದು ಎಂದರು.

ಹರ್ ಘರ್ ತಿರಂಗಾ ಯೋಜನೆ ಸಂತೋಷ. ಆದರೆ ಬಾವುಟದ ಗೌರವ ಕಾಪಾಡುವಂತೆ ಈ ಕಾರ್ಯಕ್ರಮಗಳು ನಡೆಯಬೇಕು. ರಾಷ್ಟ್ರ ಧ್ವಜಕ್ಕೆ ಯಾವ ರೀತಿಯ ಅವಮಾನವೂ ಆಗಬಾರದು. ಬಾವುಟದ ಅಳತೆ, ಬಣ್ಣ ಎಲ್ಲದಕ್ಕೂ ಅರ್ಥ, ಗೌರವ ಇದೆ. ಕಾಂಗ್ರೆಸ್ ಅದನ್ನು ಕಾಪಾಡಿದೆ. ಈಗಿನ ಸರಕಾರವೂ ಸಹಕರಿಸಬೇಕು ಎಂದೂ ಲೋಬೋ ಹೇಳಿದರು.

- Advertisement -

ಈ ಸರಕಾರವು ನಿರಂಕುಶದತ್ತ ಸಾಗಿದೆ. ಆದರೆ ರಾಷ್ಟ್ರ ಭಕ್ತಿಯಲ್ಲಾದರೂ ಸಾಚಾ ಆಗಿ ನಡೆದುಕೊಳ್ಳಲಿ ಎಂದು ತಿರುಗೇಟು ನೀಡಿದರು.

 ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಶಾಹುಲ್ ಹಮೀದ್, ಪ್ರಕಾಶ್ ಸಾಲಿಯಾನ್, ಹೈದರ್, ಲಕ್ಷ್ಮಣ್, ಸುನೀಲ್ ಪೂಜಾರಿ, ಪ್ರೇಮನಾಥ, ರಾಕೇಶ್, ಟಿ. ಕೆ. ಸುಧೀರ್ ಮತ್ತಿತರರು ಉಪಸ್ಥಿತರಿದ್ದರು.

Join Whatsapp