ಗುಡಿಸಲಿಗೆ ನುಗ್ಗಿದ ಲಾರಿ: ಗರ್ಭಿಣಿ ಸೇರಿ ನಾಲ್ಕು ಮಂದಿ ಸಾವು

Prasthutha|

ಅಯೋಧ್ಯೆ: ಲಾರಿಯೊಂದು ನಿಯಂತ್ರಣ ತಪ್ಪಿ ಹೆದ್ದಾರಿಯಲ್ಲಿದ್ದ ಗುಡಿಸಲಿಗೆ ನುಗ್ಗಿದ ಪರಿಣಾಮ ಗರ್ಭಿಣಿ ಸೇರಿದಂತೆ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಅಯೋಧ್ಯೆ ಹೆದ್ದಾರಿಯಲ್ಲಿರುವ ಬಿಬಿಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶುಕ್ರವಾರ ನಡೆದಿದೆ.

- Advertisement -

ಬಾರಾಬಂಕಿಯ ಜೈತ್‌ಪುರ ನಿವಾಸಿ ಉಮೇಶ್ (35) ಟೈಲ್ಸ್ ಕುಶಲಕರ್ಮಿ. ಅವರು ತಮ್ಮ ಪತ್ನಿ ನೀಲಂ (32), ಪುತ್ರರಾದ ಗೋಲು (4), ಸನ್ನಿ (13) ಮತ್ತು ಮಗಳು ವೈಷ್ಣವಿ ಅವರೊಂದಿಗೆ ಅಯೋಧ್ಯೆ ಹೆದ್ದಾರಿಯ ಗುಡಿಸಲಿನಲ್ಲಿ ವಾಸಿಸುತ್ತಿದ್ದರು.

ಇಡೀ ಕುಟುಂಬ ಗುಡಿಸಲಿನಲ್ಲಿ ಮಲಗಿದ್ದು ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಲಾರಿ ನಿಯಂತ್ರಣ ತಪ್ಪಿ ಗುಡಿಸಲಿಗೆ ನುಗ್ಗಿದೆ. ಅಪಘಾತದಲ್ಲಿ ಉಮೇಶ್, ನೀಲಂ, ಗೋಳು ಮತ್ತು ಸನ್ನಿ ಸಾವನ್ನಪ್ಪಿದ್ದಾರೆ. ವೈಷ್ಣವಿ ಮಾತ್ರ ಬದುಕುಳಿದರು.

- Advertisement -

ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕಾಗಮಿಸಿ ಮೃತದೇಹಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ



Join Whatsapp