ಹಿಜಾಬ್ ಸಮರ್ಥಿಸಿ ಗೋಡೆ ಬರಹ | ನಾಲ್ಕು ಪ್ರಕರಣ ದಾಖಲು

Prasthutha|

ಹೊಸಪೇಟೆ: ಹಿಜಾಬ್ ಇಸ್‌ ಅವರ್‌ ಡಿಗ್ನಿಟಿ’, ‘ಹಿಜಾಬ್‌ ಇಸ್‌ ಅವರ್‌ ರೈಟ್‌’ ಎಂದು ಹಿಜಾಬ್ ಪರ ಸಮರ್ಥಿಸಿ ಪ್ರೌಢಶಾಲೆ, ಕಾಲೇಜುಗಳ ಗೋಡೆ ಮೇಲೆ ಬರೆದ ಬರಹಕ್ಕೆ ಸಂಬಂಧಿಸಿ ನಾಲ್ಕು ಪ್ರಕರಣಗಳು ದಾಖಲಾಗಿದೆ. ನಗರದ ವಿಜಯನಗರ ಕಾಲೇಜು, ಶಂಕರ್‌ ಆನಂದ್‌ ಸಿಂಗ್‌ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಗೋಡೆಗಳ ಮೇಲೆ ಬರೆದ ಬರಹಕ್ಕೆ ಸಂಬಂಧಿಸಿ ಮೂರು ಠಾಣೆಗಳಲ್ಲಿ ನಾಲ್ಕು ಪ್ರತ್ಯೇಕ ಪ್ರಕರಣ ದಾಖಲಾಗಿದೆ.

- Advertisement -

ಇಂಗ್ಲಿಷ್ ಭಾಷೆಯಲ್ಲಿ ಗೋಡೆಗಳ ಮೇಲೆ HIJAB IS OUR DIGNITY, HIJAB IS OUR RIGHT ಎಂದು ಬರೆಯಲಾಗಿದ್ದು, ಕಾಲೇಜು ಪ್ರಾಂಶುಪಾಲರು ನೀಡಿರುವ ದೂರಿನ ಮೇರೆಗೆ ಗ್ರಾಮೀಣ ಮತ್ತು ಚಿತ್ತವಾಡ್ಗಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ, ಅಲ್ಲದೇ ಸರ್ಕಾರಿ ಬಾಲಕಿಯರ ಪ್ರೌಢಶಾಲೆ, ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಶಾಲೆಯ ಗೋಡೆಗಳ ಮೇಲೂ ಬರಹಗಳು ಕಂಡುಬಂದಿದ್ದು ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಅರುಣ್‌ ಕೆ.ಮಾಹಿತಿ ನೀಡಿದ್ದಾರೆ.

ಜಿಲ್ಲಾ ಕ್ರೀಡಾಂಗಣದ ಗೋಡೆಗಳು ಸೇರಿದಂತೆ ಗುರು ಪದವಿಪೂರ್ವ ಕಾಲೇಜಿನ ಗೋಡೆಗಳಲ್ಲಿಯೂ ಹಿಜಾಬ್‌ ಬೆಂಬಲಿಸಿ ಬರಹ ಬರೆಯಲಾಗಿದ್ದು, ತಕ್ಷಣವೇ ನಗರಸಭೆ ಸಿಬ್ಬಂದಿಯ ಮೂಲಕ ಬರಹಗಳ ಮೇಲೆ ಸುಣ್ಣ, ಬಣ್ಣ ಬಳಿಯಲಾಗಿದೆ.

Join Whatsapp