ವಂಚನೆ ಪ್ರಕರಣ: ಮಾಜಿ ರಣಜಿ ಕ್ರಿಕೆಟಿಗ ನಾಗರಾಜು ಬಂಧನ

Prasthutha|

ಹೈದರಾಬಾದ್: ವಂಚನೆ ಆರೋಪದಲ್ಲಿ ಮಾಜಿ ರಣಜಿ ಕ್ರಿಕೆಟಿಗ ನಾಗರಾಜು ಬುಡುಮುರು ಅವರನ್ನು ಆಂಧ್ರಪ್ರದೇಶದಲ್ಲಿ ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.

- Advertisement -

ನಾಗರಾಜು ಬುಡುಮುರು ಅವರು ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ ಅವರ ಹೆಸರನ್ನು ದುರುಪಯೋಗಪಡಿಸಿ 60 ಕಂಪೆನಿಗಳಿಗೆ 3 ಕೋಟಿ ರೂಪಾಯಿ ವಂಚಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.


ಡಿಸೆಂಬರ್ ನಲ್ಲಿ ನಾಗರಾಜು ಬುಡುಮುರು ಅವರು ನಗರದ ಎಲೆಕ್ಟ್ರಾನಿಕ್ಸ್ ಅಂಗಡಿಯೊಂದರ ಉದ್ಯೋಗಿಯೊಬ್ಬರನ್ನು ಕರೆಸಿಕೊಂಡು ಜಗನ್ ಮೋಹನ್ ರೆಡ್ಡಿಯ ಸಹಾಯಕನಂತೆ ನಟಿಸಿ, ಕಾರ್ಪೊರೇಟ್ ಒಬ್ಬರ ಬಳಿ ಹಣ ಪಡೆದು ವಂಚಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.



Join Whatsapp