ಕರ್ನಾಟಕವನ್ನು ಅಧಿಕೃತವಾಗಿಯೇ ಬಜರಂಗದಳ ನಡೆಸುತ್ತಿದೆ: ಪ್ರಿಯಾಂಕ್ ಖರ್ಗೆ

Prasthutha|

ಬೆಂಗಳೂರು: ಕರ್ನಾಟಕವನ್ನು  ಅಧಿಕೃತವಾಗಿ ಬಜರಂಗದಳ ಮತ್ತು ಇತರ ಸಮಾಜ ಘಾತುಕ ಶಕ್ತಿಗಳಿಂದ ನಡೆಸಲಾಗುತ್ತಿದೆ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

ಈ ಬಗ್ಗೆ ಟ್ವೀಟ್ ಮಾಡಿರುವ ಅವರು,  ನಾಡಿನ ಜನತೆಯನ್ನು ಹಲಾಲ್  ಕಟ್, ಜಟ್ಕಾ ಕಟ್ ಎಂಬ ಅಪ್ರಬುದ್ದ ಚರ್ಚೆಯಲ್ಲಿ ತೊಡಗಿಸಿ ಸರ್ಕಾರ ಇಂದಿರಾ ಕ್ಯಾಂಟೀನ್‌ನ ‘ಅನುದಾನ ಕಟ್’ ಮಾಡಿದೆ. ಆಹಾರದ ವಿಷಯದಲ್ಲೂ ರಾಜಕೀಯ ಮಾಡುತ್ತ, ಕಾಶ್ಮೀರ್ ಫೈಲ್ಸ್‌ ಗೆ ತೆರಿಗೆ ವಿನಾಯಿತಿ ನೀಡಿದ ಬಿಜೆಪಿ ಸರ್ಕಾರಕ್ಕೆ ಜನರಿಗೆ ಆಹಾರ ನೀಡುವ ಕನಿಷ್ಠ ಯೋಗ್ಯತೆ ಇಲ್ಲದಾಗಿದೆ ಎಂದು ಬರೆದುಕೊಂಡಿದ್ದಾರೆ. 

Join Whatsapp