ಉತ್ತಮ ಅವಕಾಶಕ್ಕಾಗಿ ಬಿಜೆಪಿ ಸೇರ್ಪಡೆ: ಮಹಾರಾಷ್ಟ್ರ ಮಾಜಿ ಸಿಎಂ ಅಶೋಕ್ ಚವ್ಹಾಣ್

Prasthutha|

ಮುಂಬೈ: ಕಾಂಗ್ರೆಸ್ ತೊರೆದು ಬಿಜೆಪಿ ಪಕ್ಷವನ್ನು ಸೇರ್ಪಡೆಯಾಗಿರುವುದು ‘ಉತ್ತಮ ಅವಕಾಶ’ ಪಡೆಯುವ ಸಲುವಾಗಿ ಎಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಅಶೋಕ್ ಚವ್ಹಾಣ್ ಹೇಳಿದ್ದಾರೆ.

- Advertisement -

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಾನು ಬಿಜೆಪಿಯಲ್ಲಿ ಉತ್ತಮ ಅವಕಾಶಗಳಿವೆ ಎಂದು ಭಾವಿಸಿದ್ದೇನೆ. ಬೇರೆ ಇನ್ಯಾವ ಕಾರಣಗಳು ಇರಲು ಸಾಧ್ಯ ಎಂದು ಕೇಳಿದ್ದಾರೆ. ಜನರ ತುಡಿತವನ್ನು ಅರಿಯುವುದು ಅಗತ್ಯ. ದೇಶದ ಜನರ ಮನಸ್ಥಿತಿ ಬಿಜೆಪಿ ಪರವಾಗಿ ಇದೆ ಎಂದುಕೊಂಡಿದ್ದೇನೆ. ಹಾಗಾಗಿ, ನಾನೂ ಜನರ ಮನಸ್ಥಿತಿಯೊಂದಿಗೆ ಹೋಗಲು ನಿರ್ಧರಿಸಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.

Join Whatsapp