ಬೆಂಗಳೂರು ಮಾಜಿ ಜೆಡಿಎಸ್ ಕಾರ್ಪೋರೇಟರ್ ಗೆ ಚೂರಿ ಇರಿತ!

Prasthutha|

ಬೆಂಗಳೂರು: ಮಾಜಿ ಜೆಡಿಎಸ್​​ ಕಾರ್ಪೋರೇಟರ್ ಅಯೂಬ್​ ಖಾನ್​​​ಗೆ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿದ ಘಟನೆ ವರದಿಯಾಗಿದೆ.

- Advertisement -

ಚಿಕ್ಕಪೇಟೆ ವಿನಾಯಕ ಥಿಯೇಟರ್​​ ಬಳಿ ಅಯೂಬ್ ಗೆ‌‌ ಸಂಬಂಧಿಕರೇ ಚೂರಿ ಇರಿದು ಕೊಲೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ.

ಹಳೇ ದ್ವೇಷದ ಕಾರಣಕ್ಕೆ ಕುಟುಂಬಸ್ಥರ ಜೊತೆ ಮಾತಿನ ಚಕಮಕಿ ನಡೆದಿದ್ದು ಆ ಬೆನ್ನಲ್ಲೇ ಅಯ್ಯೂಬ್ ಖಾನ್ ಗೆ ಚೂರಿಯಿಂದ ಇರಿದಿದ್ದಾರೆ‌

- Advertisement -

ಚಾಕುವಿನಿಂದ ಇರಿತಕ್ಕೆ ಒಳಗಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಅಯ್ಯೂಬ್ ಖಾನ್​ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಪೊಲೀಸರು ಪ್ರಕರಣ ದಾಖಲಿಸಿ ವಿಚಾರಣೆ ನಡೆಸುತ್ತಿದ್ದಾರೆ‌

Join Whatsapp