ಬಿಜೆಪಿಯ ದುರುದ್ದೇಶಪೂರಿತ ಹಿಂದುತ್ವಕ್ಕೆ ಯುವಕರು ಬಲಿ: ಸಿದ್ದರಾಮಯ್ಯ ವಾಗ್ದಾಳಿ

Prasthutha|


►‘RSS ನಾಯಕರ, ಶಾಸಕರ ಮಗ ಕೊಲೆಯಾದ ನಿದರ್ಶನ ಇದೆಯಾ?’

- Advertisement -

ಉಡುಪಿ: ಯುವಕರು ಬಿಜೆಪಿಯ ದುರುದ್ದೇಶಪೂರಿತ ಹಿಂದುತ್ವಕ್ಕೆ ಬಲಿಯಾಗುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಉಡುಪಿಯಲ್ಲಿ ಇಂದು (ಜ.22) ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಹಿಂದೂಗಳ ಪರ ಇಲ್ಲ, ಹಿಂದುತ್ವದ ಪರವಾಗಿರುವವರು. ಹಿಂದೂಗಳ ಪರವಾಗಿರುವವರು ಅಂದ್ರೆ ಮನುಷ್ಯತ್ವದ ಪರ ಇರುವವರು. ಕರಾವಳಿ ಭಾಗದಲ್ಲಿ ಕೊಲೆಯಾದವರು ಹಿಂದುಳಿದ ಜಾತಿಯವರು. ಆರ್ಎಸ್ಎಸ್, ಶಾಸಕರ ಮಗ ಕೊಲೆಯಾದ ನಿದರ್ಶನ ಇದೆಯಾ? ಯಾರಾದರೂ ಕೊಲೆಯಾದರೆ ಹೆಣಗಳ ಮೇಲೆ ರಾಜಕೀಯ ಮಾಡ್ತಾರೆ ಎಂದು ಕಿಡಿಕಾರಿದರು.

ಸ್ಯಾಂಟ್ರೋ ರವಿಯಿಂದ ಆರಗ ಜ್ಞಾನೇಂದ್ರ ಬಣ್ಣ ಬಯಲು
ಸ್ಯಾಂಟ್ರೋ ರವಿಯನ್ನು ಪೊಲೀಸ್ ಕಸ್ಟಡಿಗೆ ಕೇಳಲೇ ಇಲ್ಲ. ರವಿಯನ್ನು ಕಸ್ಟಡಿಗೆ ಕೇಳಿದರೆ ಇವರ ಜಾತಕವೆಲ್ಲಾ ಹೊರ ಬರುತ್ತೆ. ಸ್ಯಾಂಟ್ರೋ ರವಿಯಿಂದ ಆರಗ ಜ್ಞಾನೇಂದ್ರ ಬಣ್ಣ ಬಯಲಾಗಬಹುದು. ಈ ಕಾರಣಕ್ಕೆ ಸ್ಯಾಂಟ್ರೋ ರವಿಯನ್ನು ಪೊಲೀಸ್ ಕಸ್ಟಡಿಗೆ ಕೇಳಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

Join Whatsapp