ಅಕ್ಕಿಗಾಗಿ ಕರೆ ಮಾಡಿದ ವ್ಯಕ್ತಿಗೆ ‘ಸತ್ತೋಗು’ ಎಂದ ಆಹಾರ ಸಚಿವ ಉಮೇಶ್ ಕತ್ತಿ

Prasthutha|

ಬೆಳಗಾವಿ : ಲಾಕ್ಡೌನ್ ಸಮಯದಲ್ಲಿ ಸರ್ಕಾರದಿಂದ ಕೊಡುತ್ತಿದ್ದ ರೇಷನ್ ಅಕ್ಕಿ ಕಡಿತ ಮಾಡುವುದು ಸರಿಯಲ್ಲ. ಕಡಿತ ಮಾಡ್ಬೇಡಿ. ಅಲ್ಲಿಯವರೆಗೆ ಉಪವಾಸದಿಂದ ಸಾಯೋದ ಎಂದಿದ್ದಕ್ಕೆ ಸಚಿವ ಉಮೇಶ್ ಕತ್ತಿ, ಸಾಯೋದು ಒಳ್ಳೆಯದು. ಅದಕ್ಕಿಂತ ಮೊದಲು ಅಕ್ಕಿ ಮಾರಾಟ ಮಾಡೋ ದಂಧೆ ನಿಲ್ಲಿಸಿ ಎಂದು ಉಡಾಫೆಯ ಉತ್ತರ ನೀಡಿದ್ದಾರೆ.

- Advertisement -

ಸಚಿವ ಉಮೇಶ್ ಕತ್ತಿಯ ಅಹಂಕಾರದ ಆಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇದು ಗದಗ ಜಿಲ್ಲೆಯ ಕುರ್ತಕೋಟೆ ಗ್ರಾಮದ ಕಾರ್ಯಕರ್ತ ಈಶ್ವರ್ ಆರ್ಯ ಹಾಗೂ ಸಚಿವ ಉಮೇಶ್ ಕತ್ತಿ ಮಾತನಾಡಿರುವ ಸಂಭಾಷಣೆ ಎಂದು ಹೇಳಲಾಗುತ್ತಿದೆ.

ಸಚಿವ ಉಮೇಶ್ ಕತ್ತಿಗೆ ಪೋನ್ ಮಾಡಿದ ಈಶ್ವರ್ ಆರ್ಯ ಅವರು, ನೀವು 2 ಕೆಜಿ ಅಕ್ಕಿ ಮಾಡಿದ್ದೀರಿ. ಅದು ಸಾಕಾಗುತ್ತಾ? ಎಂಬುದಾಗಿ ಪ್ರಶ್ನಿಸಿದ್ದಾರೆ. ಇದಕ್ಕೆ ಕತ್ತಿ 3 ಕೆಜಿ ರಾಗಿ ಮಾಡಿತ್ತೀವಿ ಎಂದಿದ್ದಾರೆ. ಉತ್ತರ ಕರ್ನಾಟಕದ ಜನ ರಾಗಿ ತಿನ್ನಾತ್ತಾರಾ ಎಂದು ಮರು ಪ್ರಶ್ನಿಸಿದ್ದಕ್ಕೆ, 2 ಕೆಜಿ ಜೋಳ ಮಾಡಿದ್ದೀವಿ ಎಂದಿದ್ದಾರೆ. ಸಾರ್ ತಿಂಗಳಿಗೆ 2 ಕೆಜಿ ಸಾಲುತ್ತಾ ಅಂದ್ರೆ, ಕೇಂದ್ರ ಸರ್ಕಾರ 5 ಕೆಜಿ ಅಕ್ಕಿ ಕೊಡುತ್ತೆ ಅಂತ ಸಚಿವರು ಹೇಳಿದ್ದಾರೆ.

- Advertisement -

ಆಯ್ತು ಸಾರ್.. ಅಕ್ಕಿ, ಜೋಳ ಯಾವಾಗ ಕೊಡ್ತೀರಿ ಅಂದ ಈಶ್ವರ್ ಅವರ ಮಾತಿಗೆ, ಬರುವ ತಿಂಗಳ ಮೇ ನಲ್ಲಿ ನೀಡುತ್ತೇವೆ ಅಂತ ಸಚಿವ ಉಮೇಶ್ ಕತ್ತಿ ಹೇಳಿದ್ದಾರೆ. ಸಾರ್ ಬರುವ ತಿಂಗಳು ಕೊಡ್ತೀರಾ. ಅಲ್ಲಿಯವರೆಗೆ ಉಪವಾಸ ಇರುವುದಾ ಅಥವಾ ಸತ್ತು ಹೋಗುದಾ ಅಂದಾಗ, ಸಚಿವ ಉಮೇಶ್ ಕತ್ತಿ ಸತ್ತು ಹೋಗೋದು ಒಳ್ಳೆದು, ಅದಕ್ಕಿಂತ ಪೋನ್ ಮಾಡುವುದು ಬಿಡಿ ಎಂದಿದ್ದಾರೆ. ಆದ್ರೇ ಸಾರ್ ನೀವು ಮಂತ್ರಿಗಳು, ಜನಕ್ಕೆ ಉತ್ತರಿಸಬೇಕಾದವರು ನೀವು ಹೀಗ್ ಅಂದ್ರೆ ಅಂದಿದ್ದಕ್ಕೆ ಸಚಿವರು ಪೋನ್ ಕಟ್ ಮಾಡಿದ್ದಾರೆ. ಈ ದರ್ಪದಿಂದ ಮಾತನಾಡಿದ ಸಚಿವರು ಜನರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

Join Whatsapp