ಅಲಪ್ಪುಝದಲ್ಲಿ ಅಪಘಾತ: ಐವರು ಇಸ್ರೋ ಸಿಬ್ಬಂದಿ ಮೃತ್ಯು

Prasthutha|

ಆಲಪ್ಪುಝ: ಕೇರಳದ ಅಲಪ್ಪುಳ ಜಿಲ್ಲೆಯ ಅಂಬಲಪುಳದಲ್ಲಿ ಸೋಮವಾರ ಬೆಳಿಗ್ಗೆ ಕಾರಿಗೆ ಲಾರಿಯೊಂದು ಡಿಕ್ಕಿಹೊಡೆದ ಪರಿಣಾಮ ಕಾರಿನಲ್ಲಿದ್ದ ಐವರು ಇಸ್ರೋ ಸಂಸ್ಥೆಯ ಸಿಬ್ಬಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ.

- Advertisement -


ಇವರು ತಿರುವನಂತಪುರದಲ್ಲಿರುವ ಇಸ್ರೋ- ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಕ್ಯಾಂಟೀನ್ ಸಿಬ್ಬಂದಿ ಎಂದು ತಿಳಿದುಬಂದಿದೆ.


ಪ್ರಸಾದ್, ಶಿಜು, ಅಮಲ್, ಸಚಿನ್ ಮತ್ತು ಸುಮೊದ್ ಮೃತಪಟ್ಟವರು. ಲಾರಿಯು ಆಂಧ್ರ ಪ್ರದೇಶದಿಂದ ಅಕ್ಕಿ ಹೇರಿಕೊಂಡು ಅಲಪ್ಪುಝಕ್ಕೆ ಬರುತ್ತಿತ್ತು; ಕಾರು ತಿರುವನಂತಪುರದತ್ತ ಹೊರಟಿತ್ತು. ನಾಲ್ವರು ಸ್ಥಳದಲ್ಲೇ ಸಾವಿಗೀಡಾದರೆ, ಒಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದರು ಎಂದು ಅಂಬಲಪುಝ ಪೊಲೀಸರು ತಿಳಿಸಿದ್ದಾರೆ.

Join Whatsapp