ಮತಾಂತರ ತಡೆ ಕಾಯ್ದೆಯಡಿ ಉತ್ತರ ಪ್ರದೇಶದಲ್ಲಿ ಮೊದಲ ಬಂಧನ

Prasthutha|

ಬರೇಲಿ : ಹೊಸದಾಗಿ ಜಾರಿಯಾದ ಮತಾಂತರ ವಿರೋಧಿ ಕಾನೂನಿನಡಿ ಪ್ರಕರಣ ದಾಖಲಾದ ಮೂರು ದಿನಗಳ ಬಳಿಕ, ಮೊದಲ ಆರೋಪಿಯನ್ನು ಬಂಧಿಸಲಾಗಿದೆ.

- Advertisement -

ಆರೋಪಿಯನ್ನು ಉವೈಷ್ ಅಹಮದ್ (22) ಎಂದು ಗುರುತಿಸಲಾಗಿದೆ. ಆತನ ವಿರುದ್ಧ ಭಾನುವಾರ ಪ್ರಕರಣ ದಾಖಲಾಗಿತ್ತು.

ಉತ್ತರ ಪ್ರದೇಶ ಕಾನೂನು ಬಾಹಿರ ಧಾರ್ಮಿಕ ಮತಾಂತರ ಸುಗ್ರೀವಾಜ್ಞೆಯಡಿ ಅಹಮದ್ ವಿರುದ್ಧ ದೂರು ದಾಖಲಾಗಿದೆ. ಬರೇಲಿಯ ದೇವೊರಾನಿಯದ 20ರ ಹರೆಯದ ಯುವತಿಯನ್ನು ಅಪಹರಿಸಿ, ಮತಾಂತರ ಮಾಡುವುದಾಗಿ ಬೆದರಿಕೆಯೊಡ್ಡಿದ ಆರೋಪ ಅಹಮದ್ ವಿರುದ್ದ ದಾಖಲಿಸಲಾಗಿದೆ.  

Join Whatsapp