ದುಬೈಯಲ್ಲಿ ಅಗ್ನಿ ಅವಘಡ| ಕೇರಳ ಮೂಲದ ದಂಪತಿ ಸೇರಿ 16 ಮಂದಿ ಮೃತ್ಯು

Prasthutha|

ದುಬೈ: ದೇರಾ ಅಲ್ ಮುರಾರ್‌ನ ವಸತಿ ಕಟ್ಟಡದಲ್ಲಿ ಸಂಭವಿಸಿದ ಭಾರೀ ಅಗ್ನಿ ಅವಘಡದಲ್ಲಿ ಕೇರಳ ಮೂಲದ ದಂಪತಿ ಸೇರಿದಂತೆ 16 ಮಂದಿ ಮೃತಪಟ್ಟಿರುವುದಾಗಿ ವರದಿಯಾಗಿದೆ.

- Advertisement -

ಈ ಅವಘಡದಲ್ಲಿ ಸುಮಾರು 10 ಮಂದಿ ಗಾಯಗೊಂಡಿದ್ದಾರೆ. ಕೇರಳದ ಮಲಪ್ಪುರಂ ವೇಙರ ಮೂಲದ ಕಲಙಾಡನ್ ರಿಜೇಶ್ (38) ಮತ್ತು ಅವರ ಪತ್ನಿ ಕಂದಮಂಗಲತು ಜಿಶಿ (32) ಮೃತ ದಂಪತಿಗಳು. ರಿಜೇಶ್ ದುಬೈನಲ್ಲಿ ಟ್ರಾವೆಲ್ ಉದ್ಯೋಗಿಯಾಗಿದ್ದು, ಜಿಶಿ ಖಿಸೈಸ್‌ನ ಕ್ರೆಸೆಂಟ್ ಶಾಲೆಯಲ್ಲಿ ಶಿಕ್ಷಕಿಯಾಗಿದ್ದಾರೆ.

ದಂಪತಿಗಳು ವಾಸ್ತವ್ಯವಿರುವ ಪಕ್ಕದ ಕೋಣೆಯಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ಹೇಳಲಾಗುತ್ತಿದೆ. ಮೃತರಲ್ಲಿ ಕೇರಳ ಮೂಲದ ದಂಪತಿಗಳ ಹೊರತಾಗಿ ಇಬ್ಬರು ತಮಿಳುನಾಡಿನವರು, ಮೂವರು ಪಾಕಿಸ್ತಾನಿಗಳು ಮತ್ತು ನೈಜೀರಿಯಾದ ಮಹಿಳೆ ಸೇರಿದ್ದಾರೆ.

- Advertisement -

ಕಟ್ಟಡದ ಆರನೇ ಮಹಡಿಯಲ್ಲಿ ಈ ಅನಾಹುತ ಸಂಭವಿಸಿದೆ. ಅವಘಡ ಸಂಭವಿಸಿದ ಕೆಲವೇ ಕ್ಷಣಗಳಲ್ಲಿ ಧಾವಿಸಿ ಬಂದ ದುಬೈ ಸಿವಿಲ್ ಡಿಫೆನ್ಸ್ ತಂಡ ಕಟ್ಟಡದಲ್ಲಿದ್ದ ಹಲವರನ್ನು ರಕ್ಷಿಸಿ ಬೆಂಕಿ ನಂದಿಸಿದೆ.

Join Whatsapp