ಜನರೇಟರ್ ಆಫ್ ವಿಚಾರ: ಮದುವೆ ಮನೆಯಲ್ಲಿ ಹೊಡೆದಾಟ|ಹಸೆಮಣೆ ಏರಬೇಕಿದ್ದ ವಧುವರರು ಪೊಲೀಸ್ ಸ್ಟೇಷನಿಗೆ!

Prasthutha|

ಉತ್ತರಪ್ರದೇಶ: ರಾತ್ರಿ ನಡೆಯುತ್ತಿದ್ದ ವಿವಾಹ ಕಾರ್ಯಕ್ರಮವೊಂದರಲ್ಲಿ ಜನರೇಟರ್ ಆಫ್ ಆದ ಕಾರಣಕ್ಕೆ ವರ ಹಾಗೂ ವಧುವಿನ ಕಡೆಯವರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಓರ್ವನಿಗೆ ಗಂಭೀರ ಗಾಯವಾಗಿದ್ದು, ಹಲವರು ಆಸ್ಪತ್ರೆಗೆ ದಾಖಲಾಗಿದ್ದಾರೆ.

- Advertisement -

ಉತ್ತರ ಪ್ರದೇಶದ ಪಿಲಿಭಿತ್‌ನಲ್ಲಿ ರಾತ್ರಿ ನಡೆದ ವಿವಾಹ ಕಾರ್ಯಕ್ರಮದಲ್ಲಿ ಜನರೇಟರ್ ಆಫ್ ಆದ ಸಣ್ಣ ವಿಚಾರಕ್ಕೆ ಹೆಣ್ಣು ಮತ್ತು ಗಂಡಿನ ಕಡೆಯವರ‌ ನಡುವೆ ಮಾತಿನ‌ ಚಕಮಕಿ ನಡೆದಿದೆ. ಬಳಿಕ ನೋಡ ನೋಡುತ್ತಿದ್ದಂತೆ ಕೈಗೆ ಸಿಕ್ಕಿದ ವಸ್ತುಗಳನ್ನು ಎತ್ತಿಕೊಂಡು ಪರಸ್ಪರ ಹೊಡೆದಾಡಿಕೊಂಡಿದ್ದಾರೆ.

ಶಹಜಹಾನ್‌ಪುರ ಜಿಲ್ಲೆಯ ಥಾನಾ ಕಾಂತ್ ಪ್ರದೇಶದ ಜೋರವಾನ್ ಗ್ರಾಮದ ನಿವಾಸಿ ರವೀಂದ್ರ ಪಾಲ್ ಎನ್ನುವವರ ಪುತ್ರನ ವಿವಾಹವು ಬಿಲ್ಸಂದಾ ಪ್ರದೇಶದ ಮುದಿಯಾ ಬಿಲ್ಹಾರ ಗ್ರಾಮದ ನಿವಾಸಿ ಮೋಹನ್ ಲಾಲ್ ಎಂಬವರ ಪುತ್ರಿ ಸ್ವಾತಿಯೊಂದಿಗೆ ನಡೆಯುತ್ತಿತ್ತು.

- Advertisement -

ಆ ಸಂದರ್ಭದಲ್ಲಿ ಈ ಗಲಾಟೆ ನಡೆದಿದ್ದು, ಗಲಾಟೆಯಲ್ಲಿ ವರನ ಕಡೆಯ ಹಲವರು ಗಾಯಗೊಂಡಿದ್ದಾರೆ. ಒಬ್ಬ ಯುವಕನ ತಲೆಗೆ ಗಂಭೀರವಾಗಿ ಗಾಯವಾಗಿದೆ ಎನ್ನಲಾಗಿದೆ.

ಇಷ್ಟೆಲ್ಲಾ ಘಟನೆ ನಡೆದ ನಂತರ ಹುಡುಗಿ ಮದುವೆಯಾಗಲು ನಿರಾಕರಿಸಿದ್ದಾಳೆ ಎನ್ನಲಾಗಿದೆ. ನಂತರ ಹಸೆಮಣೆ ಏರಬೇಕಾಗಿದ್ದ ವಧು ವರರು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.

Join Whatsapp