ರಸಗೊಬ್ಬರ ಹಗರಣ: ರಾಜಸ್ಥಾನ ಸಿಎಂ ಗೆಹ್ಲೋಟ್ ಸಹೋದರನ ಮನೆ ಮೇಲೆ ಸಿಬಿಐ ದಾಳಿ

Prasthutha|

ನವದೆಹಲಿ: ರಸಗೊಬ್ಬರ ಹಗರಣಕ್ಕೆ ಸಂಬಂಧಿಸಿದಂತೆ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಅವರ ಸಹೋದರನ ಜೋಧ್ ಪುರದಲ್ಲಿರುವ ನಿವಾಸ ಸೇರಿದಂತೆ ಅನೇಕ ಸ್ಥಳಗಳಲ್ಲಿ ಕೇಂದ್ರೀಯ ತನಿಖಾ ದಳ (ಸಿಬಿಐ) ಶೋಧ ನಡೆಸಿದೆ ಎಂದು ಸಿಬಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

- Advertisement -

ಶುಕ್ರವಾರ ಬೆಳಿಗ್ಗೆ, ಸಿಬಿಐ ತಂಡವು ಮುಖ್ಯಮಂತ್ರಿ ಗೆಹ್ಲೋಟ್ ಅವರ ಸಹೋದರ ಅಗ್ರಸೇನ್ ಗೆಹ್ಲೋಟ್ ಅವರ ಜೋಧಪುರದಲ್ಲಿರುವ ನಿವಾಸಕ್ಕೆ ಶೋಧಕ್ಕಾಗಿ ಆಗಮಿಸಿದೆ.

ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಸಹೋದರ ಅಗ್ರಸೇನ್ ಗೆಹ್ಲೋಟ್ ರಸಗೊಬ್ಬರ ವ್ಯಾಪಾರಿಯಾಗಿದ್ದಾರೆ.

- Advertisement -

ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ 2007 ಮತ್ತು 2009 ರ ನಡುವೆ ದೊಡ್ಡ ಪ್ರಮಾಣದ ಮ್ಯೂರಿಯಟ್ ಆಫ್ ಪೊಟ್ಯಾಷ್ (ಎಂಒಪಿ) ಅನ್ನು ವಿದೇಶಗಳಿಗೆ ಸಬ್ಸಿಡಿ ದರದಲ್ಲಿ ರಫ್ತು ಮಾಡಿದ ಆರೋಪ ಮೇಲೆ ಸಿಬಿಐ ದಾಳಿ ನಡೆಸಿದೆ. ಈ ಹಿಂದೆ, ಇಡಿ 2020 ರಲ್ಲಿ ಸಹ ದಾಳಿಗಳನ್ನು ನಡೆಸಿತ್ತು.

ಜೋಧಪುರದಲ್ಲಿರುವ ಅಗ್ರಸೇನ್ ಗೆಹ್ಲೋಟ್ ಅವರ ನಿವಾಸ ಮತ್ತು ರಾಜಸ್ಥಾನದ ಇತರ ಸ್ಥಳಗಳಲ್ಲಿ ಸಿಬಿಐ ದಾಳಿಗಳು ಇನ್ನೂ ನಡೆಯುತ್ತಿವೆ.



Join Whatsapp