ಪಂಚರತ್ನ ಯಾತ್ರೆಯ ಅಲೆಯನ್ನು ಹೆದರಿ ಕೊರೋನಾ ಭೂತ ಬಿಡುತ್ತಿದ್ದಾರೆ: ಎಚ್.ಡಿ ಕುಮಾರಸ್ವಾಮಿ

Prasthutha|

►ಈ ಬಗ್ಗೆ ಕೇಶವ ಕೃಪದಲ್ಲಿ ಚರ್ಚೆಯಾಗುತ್ತಿದೆ ಎಂದ ಮಾಜಿ ಸಿಎಂ

- Advertisement -


ಮಂಡ್ಯ: ಜೆಡಿಎಸ್ ಹಮ್ಮಿಕೊಂಡಿರುವ ಪಂಚರತ್ನ ರಥಯಾತ್ರೆಯ ಅಲೆಯನ್ನು ಹೆದರಿ ಕೊರೋನಾ ಭೂತ ಬಿಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.


ಮಂಡ್ಯದ ಗೆಜ್ಜಲಗೆರೆಯಲ್ಲಿಂದು ಕೊರೋನಾ ರೂಪಾಂತರಿ ತಳಿ ವಿಚಾರಕ್ಕೆ ಸಂಬಂಧಿಸಿಂತೆ ಮಾತನಾಡಿದ ಅವರು, ಕೊರೋನಾದಿಂದ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುವುದು ಸೂಕ್ತ. ಕೊರೋನಾ ವಿಚಾರವಾಗಿ ನಾನು ಲಘುವಾಗಿ ಮಾತನಾಡುವುದಿಲ್ಲ. ಯಾವುದೇ ಸಾಂಕ್ರಾಮಿಕ ರೋಗ ಬಂದಾಗ ಸರ್ಕಾರ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕು. ಹಾಗೇ ಈಗ ಚೀನಾದಲ್ಲಿ ಕೊರೋನಾ ಹರಡುತ್ತಿರುವ ವಿಚಾರವನ್ನು ಗಮನದಲ್ಲಿಟ್ಟುಕೊಂಡು ನಮ್ಮ ಸರ್ಕಾರ ಕ್ರಮ ತೆಗೆದುಕೊಳ್ಳುತ್ತಿರುವುದನ್ನು ಒಪ್ಪಿಕೊಳ್ಳುತ್ತೇನೆ. ಅದಕ್ಕೆ ನನ್ನ ಸಹಕಾರ ಇದೆ ಎಂದಿದ್ದಾರೆ.

- Advertisement -


ಆದರೆ ನನಗೊಂದು ಮಾಹಿತಿ ಇದೆ. ಈ ಭೂತ ಬಿಡುತ್ತಿರುವುದು ಪಂಚರತ್ನ ರಥಯಾತ್ರೆಯಲ್ಲಿ ಜನತೆಯ ಅಲೆಯನ್ನು ನೋಡಿ. ಈ ಬಗ್ಗೆ ಕೇಶವ ಕೃಪದಲ್ಲಿ ಚರ್ಚೆಯಾಗುತ್ತಿದೆ. ಪ್ರಧಾನಮಂತ್ರಿಗಳ ಗಮನಕ್ಕೆ ತಂದು, ಪಂಚರತ್ನ ಯಾತ್ರೆಗೆ ನಿರ್ಬಂಧ ಹೇರಲು ಹುನ್ನಾರ ನಡೆಯುತ್ತಿದೆ ಎಂಬ ಮಾಹಿತಿ ಇರುವುದಾಗಿ ಹೇಳಿದ್ದಾರೆ.

Join Whatsapp