ಮಂಗಳೂರು: ಫಾದರ್ ಸ್ಟ್ಯಾನ್ ಸ್ವಾಮಿ ಸಾಂಸ್ಥಿಕ ಹತ್ಯೆ| ಹಂಪನಕಟ್ಟೆಯ ಕ್ಲಾಕ್ ಟವರ್ ಬಳಿ SDPI ಪ್ರತಿಭಟನೆ

Prasthutha|

ಫಾದರ್ ಸ್ಟ್ಯಾನ್ ಸ್ವಾಮಿ ಸಾಂಸ್ಥಿಕ ಹತ್ಯೆ ಖಂಡಿಸಿ ಮಂಗಳೂರು ನಗರದ ಹಂಪನಕಟ್ಟೆಯ ಕ್ಲಾಕ್ ಟವರ್ ಬಳಿ SDPI ಪ್ರತಿಭಟನೆ ನಡೆಸಿದೆ.

- Advertisement -

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ SDPI ರಾಷ್ಟ್ರೀಯ ಪ್ರದಾನ ಕಾರ್ಯದರ್ಶಿ ಇಲ್ಯಾಸ್ ಮೊಹಮ್ಮದ್ ತುಂಬೆ, ಮೋದಿ ಸರ್ಕಾರವು ಎಲ್ಲಾ ರಂಗಗಳಲ್ಲೂ ಪ್ರಜಾಪ್ರಭುತ್ವವನ್ನು ಸುಟ್ಟು ಬೂದಿ ಮಾಡುತ್ತಿದೆ. ಸರ್ಕಾರವನ್ನು ಟೀಕಿಸುವವರನ್ನು ಯುಎಪಿಎಗಳಂತಹಾ ದೇಶದ್ರೋಹ ಕೇಸುಗಳನ್ನು ದಾಖಲಿಸಿ ಜೈಲಿಗೆ ಹಾಕಿ ಹೊರ ಜಗತ್ತನ್ನು ಕಾಣದಂತೆ ಮಾಡಲಾಗುತ್ತಿದೆ. ಸ್ಟ್ಯಾನ್ ಸ್ವಾಮಿಯವರ ಸಾವು ಇದೊಂದು ಸಾಂಸ್ಥಿಕ ಹತ್ಯೆಯಾಗಿದ್ದು, ಸರಕಾರದ ಎಲ್ಲಾ ಇಲಾಖೆಗಳು ಸೇರಿಕೊಂಡು ಒಬ್ಬ ಹೋರಾಟಗಾರನನ್ನು ಕೊಲೆ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

SDPI ದಕ್ಷಿಣಕನ್ನಡ ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ ಮಾತನಾಡಿ ಈ ದೇಶದ ಜಾತ್ಯಾತೀತ ಪ್ರಿಯರಿಗೆ ಮತ್ತು ಪ್ರಜಾಪ್ರಭುತ್ವ ಪ್ರಿಯರಿಗೆ ಈ ದೇಶದ ಕಾನೂನುಗಳು ಕಂಟಕವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

- Advertisement -

ಈ ವೇಳೆ SDPI ದ.ಕ ಜಿಲ್ಲಾಕಾರ್ಯದರ್ಶಿ ಅನ್ವರ್ ಸಾಧತ್ ಬಜತ್ತೂರ್, ಜಿಲ್ಲಾಕಾರ್ಯದರ್ಶಿ ಜಮಾಲ್ ಜೋಕಟ್ಟೆ, ಜಿಲ್ಲಾ ಸಮಿತಿ ಸದಸ್ಯ ಲ್ಯಾನ್ಸಿ ತೋರಸ್, ಕಾರ್ಪರೇಟರ್ ಮುನೀಬ್ ಬೆಂಗ್ರೆ, ಮಂಗಳೂರು ದಕ್ಷಿಣ ಕ್ಷೇತ್ರದ ಕಾರ್ಯದರ್ಶಿ ಅಕ್ಬರ್ ಕುದ್ರೋಳಿ ಉಪಸ್ಥಿತರಿದ್ದರು.  

Join Whatsapp