ಯುವಕನೊಂದಿಗೆ ಮಾತನಾಡಿದ್ದಕ್ಕೆ ಮಗಳನ್ನು ಕೊಂದ ತಂದೆ

Prasthutha|

ಹೈದರಾಬಾದ್ : 15 ವರ್ಷದ ಬಾಲಕಿಯೊಬ್ಬಳು ಗ್ರಾಮದ ಯುವಕನೊಂದಿಗೆ ಮಾತನಾಡಿದ್ದಕ್ಕೆ ತಂದೆಯೇ ಆಕೆಯನ್ನು ಕೊಲೆ ಮಾಡಿರುವ ಆಘಾತಕಾರಿ ಘಟನೆ ತೆಲಂಗಾಣದ ವಾನಪರ್ತಿ ಜಿಲ್ಲೆಯಲ್ಲಿ ನಡೆದಿದೆ.

- Advertisement -

37 ವರ್ಷದ ತೆಲಂಗಾಣದ ರೈತ ಮಂಗಳವಾರ ಬೆಳಿಗ್ಗೆ ವಾನಪರ್ತಿ ಜಿಲ್ಲೆಯ ತಮ್ಮ ಮನೆಯಲ್ಲಿ ಅವಳನ್ನು ಕತ್ತು ಹಿಸುಕಿ ಕೊಂದಿದ್ದಾನೆ ಎಂದು ವರದಿಗಳು ತಿಳಿಸಿವೆ .

ಬೆಳಿಗ್ಗೆ 10 ಗಂಟೆ ಸುಮಾರಿಗೆ ಗ್ರಾಮದ ಯುವಕನೊಂದಿಗೆ ಮಾತನಾಡಿದ್ದಕ್ಕಾಗಿ ಬಾಲಕಿಯ ತಂದೆ ಆಕೆಗೆ  ಛೀಮಾರಿ ಹಾಕುವಾಗ, ತನ್ನ ತಾಳ್ಮೆಯನ್ನು ಕಳೆದುಕೊಂಡು ಹತ್ತಿರದ ಕೊಡಲಿಯಿಂದ ಅವಳನ್ನು ಕಡಿದು ಕೊಂದಿದ್ದು, ತೀವ್ರ ರಕ್ತಸ್ರಾವದಿಂದ ಬಾಲಕಿ ಸ್ಥಳದಲ್ಲೇ ಮೃತಪಟ್ಟಿರುವುದಾಗಿ ಎಂದು ವಾನಪರ್ತಿ ಪೊಲೀಸ್ ವರಿಷ್ಠಾಧಿಕಾರಿ ಕೆ.ಅಪೂರ್ವ ತಿಳಿಸಿದ್ದಾರೆ.

- Advertisement -

ಈ ಸಂಬಂಧ ಭಾರತೀಯ ಪ್ಯಾನಲ್ ಕೋಡ್ (ಐಪಿಸಿ) ಸೆಕ್ಷನ್ 302 ರ ಅಡಿಯಲ್ಲಿ ಪೊಲೀಸರು ವ್ಯಕ್ತಿಯ ವಿರುದ್ಧ ಕೊಲೆ ಪ್ರಕರಣವನ್ನು ದಾಖಲಿಸಿದ್ದಾರೆ.

ಮರ್ಯಾದಾ ಹತ್ಯೆ ಎಂದು ಹಲವರು ಆರೋಪಿಸಿದರೂ, ಅದನ್ನು ನಿರಾಕರಿಸಿರುವ ಎಸ್ಪಿ ತನ್ನ ಹದಿಹರೆಯದ ಮಗಳು ಅವನ ಸಲಹೆಯನ್ನು ಕೇಳದ ಕಾರಣ ಆರೋಪಿಯು ಕೋಪದಿಂದ ವರ್ತಿಸಿದ್ದಾನೆ ಎಂದು ಅವರು ಹೇಳಿದ್ದಾರೆ..

Join Whatsapp