ಪತ್ರಕರ್ತ ಮನ್ ದೀಪ್ ಪುನಿಯಾ ಬಂಧನಕ್ಕೆ ಸಂಪಾದಕರ ಒಕ್ಕೂಟ ತೀವ್ರ ಕಳವಳ

Prasthutha|

ನವದೆಹಲಿ : ಸಿಂಘು ಗಡಿಯಲ್ಲಿ ವರದಿ ಮಾಡುತ್ತಿದ್ದಾಗ, ಹವ್ಯಾಸಿ ಪತ್ರಕರ್ತ ಮನ್ ದೀಪ್ ಪುನಿಯಾರನ್ನು ಬಂಧಿಸಿರುವುದಕ್ಕೆ ಭಾರತೀಯ ಸಂಪಾದಕರ ಒಕ್ಕೂಟ ತೀವ್ರ ಕಳವಳ ವ್ಯಕ್ತಪಡಿಸಿದೆ. ಈ ಬಗ್ಗೆ ಇಂದು ಒಕ್ಕೂಟ ಹೇಳಿಕೆಯೊಂದನ್ನು ಬಿಡುಗಡೆಗೊಳಿಸಿದೆ.

- Advertisement -

ಸುಳ್ಳು ಸುದ್ದಿಗಳ ಬಗ್ಗೆ ಪರಿಶೀಲನೆ ನಡೆಸಿ, ಸತ್ಯವನ್ನು ಜಗತ್ತಿಗೆ ತೆರೆದಿಡುವ ಸ್ವತಂತ್ರ ಪತ್ರಕರ್ತರಾದ ಪುನಿಯಾರ ಬಂಧನ ಧೈರ್ಯಶಾಲಿ ಯುವ ಧ್ವನಿಗಳನ್ನು ಹತ್ತಿಕ್ಕುವ ಯತ್ನವಾಗಿದೆ ಎಂದು ಒಕ್ಕೂಟ ಅಭಿಪ್ರಾಯ ಪಟ್ಟಿದೆ.

ತಕ್ಷಣವೇ ಪುನಿಯಾರನ್ನು ಬಿಡುಗಡೆಗೊಳಿಸುವಂತೆ ಒಕ್ಕೂಟ ಒತ್ತಾಯಿಸಿದೆ. ಆ ಮೂಲಕ ಭಯ ಅಥವಾ ಪಕ್ಷಪಾತ ರಹಿತ ವರದಿ ಮಾಡುವುದಕ್ಕೆ ಅನುವು ಮಾಡಿಕೊಡುವಂತೆ ದೆಹಲಿ ಪೊಲೀಸರನ್ನು ಅದು ಒತ್ತಾಯಿಸಿದೆ.

- Advertisement -

ರೈತರ ಪ್ರತಿಭಟನೆಯ ವರದಿ ಮಾಡುತ್ತಿದ್ದ ಪುನಿಯಾರನ್ನು ಸಿಂಘು ಗಡಿಯಲ್ಲಿ ಪೊಲೀಸರು ಬಂಧಿಸಿದ್ದು, ಅವರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಮತ್ತು ಅವರ ಮೇಲೆ ಹಲ್ಲೆ ಮಾಡಲಾದ ಆರೋಪವನ್ನು ಪುನಿಯಾ ವಿರುದ್ಧ ದಾಖಲಿಸಲಾಗಿದೆ.   

Join Whatsapp