ದೆಹಲಿ ಗಡಿಯಲ್ಲಿ ರೈತ ಪ್ರತಿಭಟನೆಯಲ್ಲಿ ಸೇರಿಕೊಳ್ಳಿ : ಕಾರ್ಯಕರ್ತರಿಗೆ ಅಕಾಲಿ ದಳ ಮನವಿ

Prasthutha|

ನವದೆಹಲಿ : ರೈತರು ಪ್ರತಿಭಟನೆ ನಡೆಸುತ್ತಿರುವ ದೆಹಲಿ ಗಡಿಭಾಗಗಳಿಗೆ ತೆರಳಿ, ಪ್ರತಿಭಟನೆಯಲ್ಲಿ ಭಾಗಿಯಾಗುವಂತೆ ತನ್ನ ಕಾರ್ಯಕರ್ತರಿಗೆ ಶಿರೋಮಣಿ ಅಕಾಲಿ ದಳ ಮನವಿ ಮಾಡಿದೆ. ಸರಕಾರವು ದಮನಕಾರಿ ಮಾರ್ಗದಲ್ಲಿ ಹೋರಾಟವನ್ನು ಹತ್ತಿಕ್ಕಲು ನೋಡುತ್ತಿದೆ ಎಂದು ಪಕ್ಷವು ಆಪಾದಿಸಿದೆ.

- Advertisement -

ಉತ್ತರ ಪ್ರದೇಶ, ಹರ್ಯಾಣದ ಬಿಜೆಪಿ ಸರಕಾರಗಳ ಜೊತೆ ಸೇರಿ ಕೇಂದ್ರ ಸರಕಾರವು ಈ ರೈತ ಆಂದೋಲನವನ್ನು ಹತ್ತಿಕ್ಕಲು ಯತ್ನಿಸುತ್ತಿದೆ. ಅನ್ನದಾತನ ಧ್ವನಿ ಅಡಗಿಸುವ ಮತ್ತು 80 ಹುತಾತ್ಮರನ್ನು ಅವಮಾನಿಸುವ ಈ ಅಸಹ್ಯ ಕೃತ್ಯ ಎಂದಿಗೂ ಯಶಸ್ವಿಯಾಗುವುದಿಲ್ಲ ಎಂಬುದನ್ನು ನಾವು ತೋರಿಸಿ ಕೊಡಬೇಕಾಗಿದೆ ಎಂದು ಅಕಾಲಿ ದಳದ ನಾಯಕ ಬಿಕ್ರಮ್ ಸಿಂಗ್ ಹೇಳಿದ್ದಾರೆ.

Join Whatsapp