ಗಡಿ ಪ್ರದೇಶಕ್ಕೆ ಹಿಂದಿರುಗುವಂತೆ ರೈತರಿಗೆ ಪಂಜಾಬ್ ಸಿಎಂ ಅಮರಿಂದರ್ ಸಿಂಗ್ ಮನವಿ

Prasthutha|

ನವದೆಹಲಿ : ರೈತರ ಪ್ರತಿಭಟನೆ ಹಿಂಸಾತ್ಮಕ ಸ್ವರೂಪಕ್ಕೆ ತಿರುಗಿರುವ ಹಿನ್ನೆಲೆಯಲ್ಲಿ, ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ. ದೆಹಲಿಯೊಳಗೆ ನುಗ್ಗಿರುವ ರೈತರು ಯಾವು ಮೊದಲು ಪ್ರತಿಭಟನೆ ನಡೆಸುತ್ತಿದ್ದ ಗಡಿ ಪ್ರದೇಶಕ್ಕೆ ಹಿಂದಿರುಗುವಂತೆ ಅವರು ಮನವಿ ಮಾಡಿದ್ದಾರೆ.

- Advertisement -

ದೆಹಲಿಯ ದೃಶ್ಯಗಳಿಂದ ಆಘಾತವಾಗಿದೆ. ಕೆಲವು ದುಷ್ಕರ್ಮಿಗಳಿಂದ ನಡೆದ ಹಿಂಸಾಚಾರ ಒಪ್ಪತಕ್ಕದ್ದಲ್ಲ. ರೈತ ಮುಖಂಡರು ಇದರ ಹೊಣೆಹೊತ್ತಿಲ್ಲ ಮತ್ತು ಟ್ರಾಕ್ಟರ್ ರ್ಯಾಲಿ ಅಮಾನತುಗೊಳಿಸಿದ್ದಾರೆ. ನೈಜ್ಯ ಕೃಷಿಕರು ದೆಹಲಿ ತೆರವುಗೊಳಿಸಿ, ಗಡಿಗಳಿಗೆ ಹಿಂದಿರುಗಬೇಕು ಎಂದು ನಾನು ಮನವಿ ಮಾಡುತ್ತಿದ್ದೇನೆ ಎಂದು ಸಿಎಂ ಅಮರಿಂದರ್ ಸಿಂಗ್ ಟ್ವೀಟ್ ಮಾಡಿದ್ದಾರೆ.

Join Whatsapp