ರೈತರ ಟ್ರಾಕ್ಟರ್ ಕ್ರಾಂತಿ ಎಫೆಕ್ಟ್! | ನಾಳೆ ದೆಹಲಿ ಆನಂದ ವಿಹಾರದಿಂದ ಬಸ್ ಸಂಚಾರ ರದ್ದು

Prasthutha|

ನವದೆಹಲಿ : ಕಳೆದ 58 ದಿನಗಳಿಂದ ದೆಹಲಿ ಗಡಿಗಳಲ್ಲಿ ಕೇಂದ್ರದ ನೂತನ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿರುವ ರೈತರು ನಾಳೆ ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ, ಟ್ರಾಕ್ಟರ್ ರ್ಯಾಲಿ ನಡೆಸುವುದರಿಂದ, ದೆಹಲಿಯ ಆನಂದ ವಿಹಾರದಿಂದ 12 ಗಂಟೆಗಳ ಕಾಲ ಬಸ್ ಸಂಚಾರ ರದ್ದು ಮಾಡಲಾಗಿದೆ.

- Advertisement -

ಟ್ರಾಕ್ಟರ್ ರ್ಯಾಲಿ ಹಿನ್ನೆಲೆಯಲ್ಲಿ, ಬೆಳಗ್ಗೆ 6ರಿಂದ ಸಂಜೆ 6 ಗಂಟೆ ವರೆಗೆ ಆನಂದ ವಿಹಾರ್ ಐಎಸ್ ಬಸ್ ನಿಲ್ದಾಣದಿಂದ ಬಸ್ ಗಳು ಕಾರ್ಯಾಚರಿಸುವುದಿಲ್ಲ ಎಂದು ದೆಹಲಿ ಸಾರಿಗೆ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ನಿಗಮ ತಿಳಿಸಿದೆ.

ಆನಂದ ವಿಹಾರ ಬಸ್ ನಿಲ್ದಾಣದಿಂದ ಹೊರಡುವ ಅಂತರ್ ರಾಜ್ಯ ಬಸ್ ಗಳು ನಾಳೆ ಸರೈ ಕಾಲೆ ಖಾನ್ ನಿಂದ ಸಂಚರಿಸಲಿವೆ ಎಂದು ದೆಹಲಿ ಸಾರಿಗೆ ನಿಗಮ ತಿಳಿಸಿದೆ.   

Join Whatsapp