ನ್ಯಾಯ ಸಿಗದಿದ್ದರೆ ಅ.2ರ ವರೆಗೂ ರೈತರ ಪ್ರತಿಭಟನೆ ನಿಲ್ಲುವುದಿಲ್ಲ : ರಾಕೇಶ್ ಟಿಕಾಯತ್

Prasthutha|

ನವದೆಹಲಿ : ನ್ಯಾಯ ಸಿಗದಿದ್ದರೆ ದೆಹಲಿ ಗಡಿಭಾಗಗಳಲ್ಲಿ ರೈತರು ನಡೆಸುವ ಪ್ರತಿಭಟನೆ ಅ.2ರ ವರೆಗೂ ಮುಂದುವರಿಯಲಿದೆ ಎಂದು ಭಾರತೀಯ ಕಿಸಾನ್ ಸಂಘದ ನಾಯಕ ರಾಕೇಶ್ ಟಿಕಾಯತ್ ಹೇಳಿದ್ದಾರೆ.

- Advertisement -

ಉತ್ತರ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ರಸ್ತೆ ತಡೆ ಪ್ರತಿಭಟನೆಯನ್ನು ಹಿಂಸಾತ್ಮಕ ಸ್ವರೂಪಕ್ಕೆ ತಿರುಗಿಸುವ ಸಂಚು ನಡೆದಿರುವ ಹಿನ್ನೆಲೆಯಲ್ಲಿ ಅಲ್ಲಿನ ರಸ್ತೆ ತಡೆ ಪ್ರತಿಭಟನೆ ಕೈಬಿಟ್ಟಿರುವ ಬಗ್ಗೆ ಮಾಹಿತಿ ನೀಡಿ ಅವರು ಈ ವಿಷಯ ತಿಳಿಸಿದರು.

ಉತ್ತರ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ರೈತರ ರಸ್ತೆ ತಡೆ ಪ್ರತಿಭಟನೆಯಿರುವುದಿಲ್ಲ. ಆದರೆ, ಈ ಪ್ರದೇಶದ ರೈತರನ್ನು ಯಾವಾಗ ಬೇಕಾದರೂ ದೆಹಲಿಗೆ ಬರುವಂತೆ ಕರೆಕೊಡಬಹುದು, ಅದಕ್ಕೆ ಸಿದ್ಧರಾಗಿರುವಂತೆ ಅವರು ಮನವಿ ಮಾಡಿದರು.

Join Whatsapp