ರೈತ ಕ್ರಾಂತಿ | ವಾಟಾಳ್ ನಾಗರಾಜ್ ಪೊಲೀಸ್ ವಶಕ್ಕೆ; ಮೋದಿ ಸರಕಾರದ ವಿರುದ್ಧ ಕಿಡಿಗಾರಿದ ಕನ್ನಡಪರ ಹೋರಾಟಗಾರ

Prasthutha|

ಬೆಂಗಳೂರು : ನಗರದ ಮೈಸೂರು ಬ್ಯಾಂಕ್ ಸರ್ಕಲ್ ನಲ್ಲಿ ರೈತ ಪರ ಹೋರಾಟಕ್ಕೆ ಮುಂದಾದ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

- Advertisement -

ಮೈಸೂರು ಬ್ಯಾಂಕ್ ವೃತ್ತದಲ್ಲಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಪ್ರತಿಭಟನೆಕಾರರು ಗುದ್ದಲಿ ಹಿಡಿದು ಪ್ರತಿಭಟನೆ ನಡೆಸಿದರು. ಈ ವೇಳೆ ಧರಣಿ ಕುಳಿತ ಪ್ರತಿಭಟನಕಾರರನ್ನು ತೆರವುಗೊಳಿಸಲು ಪೊಲೀಸರು ಮುಂದಾದರು.

ಬಳಿಕ ವಾಟಾಳ್ ನಾಗರಾಜ್ ಮತ್ತು ಅವರೊಂದಿಗಿದ್ದ ಪ್ರತಿಭಟನಕಾರರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು.

- Advertisement -

ಇದೇ ವೇಳೆ ಮಾತನಾಡಿದ ವಾಟಾಳ್ ನಾಗರಾಜ್, ಪ್ರಧಾನಿ ನರೇಂದ್ರ ಮೋದಿ ಸರಕಾರ ಕೃಷಿ ಕಾನೂನು ಹಿಂಪಡೆಯಬೇಕು. ಮೋದಿ ಸರಕಾರ ಹಿಟ್ಲರ್ ನೀತಿ ಅನುಸರಿಸುತ್ತಿದೆ. ತಮ್ಮ ಪಕ್ಷ ರೈತರ ಪರವಾಗಿ ಹೋರಾಟ ಮಾಡುತ್ತದೆ ಎಂದು ಹೇಳಿದರು.

ರೈತರ ವಿರುದ್ಧ ಮೋದಿ ಸರಕಾರ ರೈತರ ವಿರುದ್ಧ ಮೊಳೆ ಹಾಕಿರುವುದನ್ನು ಖಂಡಿಸಿ ತಾವು ಗುದ್ದಲಿ ಹೋರಾಟ ಮಾಡುತ್ತಿದ್ದೇವೆ ಎಂದು ಅವರು ತಿಳಿಸಿದರು.

Join Whatsapp