ರಾಜ್ಯದಲ್ಲೂ ಹೆದ್ದಾರಿ ತಡೆ | ಕಾನೂನು ಹಿಂಪಡೆಯಲು ಬೀದಿಗಿಳಿದ ರೈತರು; ಬಿಜೆಪಿ ಅಪಪ್ರಚಾರಗಳಿಗೆ ಸೆಡ್ಡುಹೊಡೆದ ಅನ್ನದಾತರು

Prasthutha|

ಬೆಂಗಳೂರು : ರಾಜ್ಯದಲ್ಲೂ ಅನ್ನದಾತರ ಕೂಗು ಇಂದು ರಾಜ್ಯದ ಬಹುತೇಕ ಹೆದ್ದಾರಿಗಳಲ್ಲೂ ಮೊಳಗಿದೆ. ದೆಹಲಿಯಲ್ಲಿ ರೈತರು ಕಳೆದ ಎರಡು ತಿಂಗಳುಗಳಿಗಿಂತಲೂ ಹೆಚ್ಚು ಅವಧಿಯಿಂದ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಬೆಂಬಲಿಸಿ ಇಂದು ದೇಶಾದ್ಯಂತ ಹೆದ್ದಾರಿ ಬಂದ್ ಗೆ ಕರೆ ನೀಡಲಾಗಿದೆ. ಆ ಪ್ರಕಾರ, ರಾಜ್ಯದ ಬಹುತೇಕ ಹೆದ್ದಾರಿಗಳಲ್ಲಿ ರೈತರು ಬೀದಿಗಿಳಿದಿದ್ದಾರೆ.

- Advertisement -

ಮಧ್ಯಾಹ್ನ 12 ಗಂಟೆಯಿಂದ 3 ಗಂಟೆಗಳ ಕಾಲ ಪ್ರತಿಭಟನೆ ನಡೆಸುವಂತೆ ರೈತ ಮುಖಂಡರು ಕರೆ ನೀಡಿದ್ದಾರೆ. ಬೆಂಗಳೂರು ಹೊರವಲಯದ ದೇವನಹಳ್ಳಿ, ಯಲಹಂಕದಲ್ಲಿ ಪ್ರತಿಭಟನೆ ಆರಂಭವಾಗಿದೆ.

ಬೆಂಗಳೂರಿನ ಎಲ್ಲಾ ಪ್ರಮುಖ ರಸ್ತೆಗಳಲ್ಲಿ ರೈತರು ಬೀದಿಗಿಳಿದಿದ್ದಾರೆ. ಮೈಸೂರಿನಲ್ಲೂ ರೈತರು ಹೋರಾಟಕ್ಕೆ ಮುಂದಾಗಿದ್ದಾರೆ. ಮೈಸೂರಿನಲ್ಲಿ ರೈತರು ಹೆದ್ದಾರಿಯಲ್ಲಿ ಕುಳಿತು ಪ್ರತಿಭಟನೆ ಆರಂಭಿಸಿದ್ದಾರೆ.

Join Whatsapp