ಬಾಂಬ್ ತಯಾರಿಕೆಯ ಮಧ್ಯೆ RSS ಕಾರ್ಯಕರ್ತನ ಮನೆಯಲ್ಲಿ ಸ್ಫೋಟ

Prasthutha|


ಕಣ್ಣೂರು:  ಆರೆಸ್ಸೆಸ್ ಕಾರ್ಯಕರ್ತನ ಮನೆಯಲ್ಲಿ ಬಾಂಬ್ ತಯಾರಿಸುವ ಮಧ್ಯೆ ಸ್ಫೋಟ ಸಂಭವಿಸಿದ ಘಟನೆ ಇರಿಟ್ಟಿ ಸಮೀಪದ ಚಾವಶ್ಶೇರಿಯಲ್ಲಿ ನಡೆದಿದೆ.

- Advertisement -

ಚಾವಶ್ಶೇರಿಯ ಮನ್ನಾರಾದಲ್ಲಿರುವ ಆರೆಸ್ಸೆಸ್ ಕಾರ್ಯಕರ್ತ ಸುಧೀಶ್ ಅವರ ಮನೆಯ ಮುಂದೆ ಈ ಸ್ಫೋಟ ಸಂಭವಿಸಿದೆ. ನಿನ್ನೆ ಮಧ್ಯರಾತ್ರಿ ಈ ಘಟನೆ ನಡೆದಿದ್ದು, ಯಾವುದೇ ಸಾವುನೋವು ಅಥವಾ ಹಾನಿಯ ಬಗ್ಗೆ ವರದಿಯಾಗಿಲ್ಲ.

ಎರಡು ವಾರಗಳ ಹಿಂದೆಯೂ ಇಲ್ಲಿ ಸ್ಫೋಟ ಸಂಭವಿಸಿತ್ತು. ಈ ಹಿನ್ನೆಲೆಯಲ್ಲಿ ಆರ್ ಎಸ್ ಎಸ್ ಮತ್ತು ಎಸ್ ಡಿಪಿಐ ಕಾರ್ಯಕರ್ತರು ಪರಸ್ಪರ ಹೊಡೆದಾಡಿಕೊಂಡಿದ್ದರು. ಸುಧೀಶ್ ಈ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾನೆ. ಇಂತಹ ಘಟನೆ ಅಲ್ಲಿ ಪದೇ ಪದೇ ಸಂಭವಿಸುವುದು ವಾಡಿಕೆಯಾಗಿದೆ. ಈ ಪ್ರದೇಶದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.



Join Whatsapp