ಕುಡಿದ ಅಮಲಿನಲ್ಲಿ ಅಪರಿಚಿತರ ಮನೆಗೆ ನುಗ್ಗಿದ ಆರೋಪ: ಮಾಜಿ ಸಂಸದನ ಮೇಲೆ ಹಲ್ಲೆ

Prasthutha|

ನೀಲಗಿರಿ: ಕುಡಿದ ಅಮಲಿನಲ್ಲಿ ಅಪರಿಚಿತರ ಮನೆಗೆ ನುಗ್ಗಿದ ಆರೋಪದಲ್ಲಿ ಎಐಎಡಿಎಂಕೆ ಮಾಜಿ ಸಂಸದ ಗೋಪಾಲಕೃಷ್ಣನ್‌ ಮೇಲೆ ಹಲ್ಲೆ ಮಾಡಲಾಗಿದೆ.

- Advertisement -


ಗುರುವಾರ ಗೋಪಾಲಕೃಷ್ಣನ್ ಅವರು ನೀಲಗಿರಿಯ ಮುತ್ಯಾಲಮ್ಮನಪೇಟೆಯಲ್ಲಿರುವ ಅಪರಿಚಿತರ ನಿವಾಸಕ್ಕೆ ಪ್ರವೇಶಿಸಿದ್ದರು ಎಂದು ಹೇಳಲಾಗಿದ್ದು,ಅವರ ವರ್ತನೆಯಿಂದ ಕೋಪಗೊಂಡ ಮನೆಯ ಮಾಲೀಕರು (ಅಪರಿಚಿತ) ಗೋಪಾಲಕೃಷ್ಣನ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿದೆ. ಅಲ್ಲದೇ ಮನೆಯ ಮಾಲೀಕ ಕುನ್ನೂರು ಪೊಲೀಸರಿಗೂ ದೂರು ನೀಡಿದ್ದಾರೆ.


ಶುಕ್ರವಾರ ಕುನ್ನೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಗೋಪಾಲಕೃಷ್ಣ ಅವರು ಅಪರಿಚಿತ ವ್ಯಕ್ತಿಗಳು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಗೋಪಾಲಕೃಷ್ಣನ್ 2014-19ರಲ್ಲಿ ನೀಲಗಿರಿ ಕ್ಷೇತ್ರದ ಎಐಎಡಿಎಂಕೆ ಸಂಸದರಾಗಿದ್ದರು.

Join Whatsapp