ವಿಷವುಣಿಸಿ ಹಸು ಕರುಗಳ ಮಾರಣಹೋಮ: ಗೋಶಾಲಾ ಮಾಜಿ ಸಿಬ್ಬಂದಿಯ ಬಂಧನ

Prasthutha|

ನವದೆಹಲಿ: ಗ್ರೇಟರ್ ನೋಯ್ಡಾಡ ಸೂರಜ್ ಪುರದ ಖೋಡ್ನಾ ಖುರ್ದ್ ಎಂಬಲ್ಲಿ 28 ಹಸು ಮತ್ತು 26 ಕರುಗಳಿಗೆ ವಿಷವುಣಿಸಿ ಕೊಂದ ಆರೋಪದಲ್ಲಿ ಗೋಶಾಲೆಯ ಮಾಜಿ ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದೆ.

- Advertisement -

ಬಂಧಿತನನ್ನು ಧರ್ಮೇಂದ್ರ ಎಂದು ಗುರುತಿಸಲಾಗಿದ್ದು, ಈತನನ್ನು ಜಾನುವಾರುಗಳ ಪಾಲನೆಗಾಗಿ ನೇಮಿಸಲಾಗಿತ್ತು.

ಈ ಮಧ್ಯೆ ಆತ ಮಾದಕದ್ರವ್ಯದ ವ್ಯಸನಿಯಾಗಿದ್ದು, ಬೆಲೆಬಾಳುವ ವಸ್ತುಗಳನ್ನು ಕದ್ದ ಹಿನ್ನೆಲೆಯಲ್ಲಿ ಆತನನ್ನು ಕೆಲಸದಿಂದ ವಜಾಗೊಳಿಸಲಾಗಿತ್ತು. ಇದರಿಂದ ಆತ ಗೋಶಾಲೆಯ ಮಾಲಕ ಓಂ ವೀರ್ ಸಿಂಗ್, ಮೇಲೆ ತೀವ್ರ ಸಿಟ್ಟುಗೊಂಡು ಸೇಡು ತೀರಿಸಿಕೊಳ್ಳಲು ಜಾನುವಾರುಗಳಿಗೆ ವಿಷವುಣಿಸಿದ್ದಾನೆ ಎಂದು ಆರೋಪಿಸಲಾಗಿದೆ.

- Advertisement -

ಈ ಸಂಬಂಧ ಆರೋಪಿ ಧರ್ಮೇಂದ್ರ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ ಎಂದು ಠಾಣಾಧಿಕಾರಿ ಅಜಯ್ ಕುಮಾರ್ ತಿಳಿಸಿದ್ದಾರೆ.



Join Whatsapp