ವ್ಯಾಪಾರ ಮಾಡುವ ಹಕ್ಕು ಎಲ್ಲರಿಗೂ ಇದೆ; ಶಾಂತಿ ಕದಡುವ ಕೆಲಸ ಸರಿಯಲ್ಲ: ಜೆ.ಸಿ. ಮಾಧುಸ್ವಾಮಿ

Prasthutha|

ಬೆಳಗಾವಿ: ವ್ಯಾಪಾರ ಮಾಡುವ ಹಕ್ಕು ಎಲ್ಲರಿಗೂ ಇದೆ. ಅಂಗಡಿಗಳನ್ನು ಟಾರ್ಗೆಟ್ ಮಾಡುವುದು ಸರಿಯಲ್ಲ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿಹೇಳಿದ್ದಾರೆ.

- Advertisement -

 ಮುಸ್ಲಿಮರ ವ್ಯಾಪಾರಕ್ಕೆ ನಿಷೇಧ ಹೇರುವ ಸಂಘಪರಿವಾರದ  ಅಭಿಯಾನದ ಕುರಿತು  ಮಾತನಾಡಿದ ಅವರು, ತೊಂದರೆ ಕೊಡುವುದು, ಶಾಂತಿ ಕದಡುವ ಕೆಲಸ ಯಾರು ಮಾಡಿದರೂ ಗೌರವ ಬರುವುದಿಲ್ಲ. ಅದರಲ್ಲೂ ಆಡಳಿತ ಪಕ್ಷಕ್ಕಂತೂ ಗೌರವ ಬರುವುದಿಲ್ಲ ‘ ಎಂದು ತಿಳಿಸಿದರು.

‘ಹಿಂದೂಪರ ಸಂಘಟನೆಗಳು ಯಾಕೆ ಈ ರೀತಿ ಮಾಡುತ್ತಿದೆ ಎಂದು ಗೊತ್ತಿಲ್ಲ, ಎಲ್ಲರೂ ಈ ದೇಶದ ಮಕ್ಕಳೇ.  ಇಲ್ಲಿ ಎಲ್ಲರೂ ಭಾರತೀಯರೇ’ ಎಂದು ಹೇಳಿದರು.

Join Whatsapp