ಈಶ್ವರಪ್ಪ ಮತ್ತೆ ಸಚಿವರಾಗಲಿದ್ದಾರೆ: ಯಡಿಯೂರಪ್ಪ ವಿಶ್ವಾಸ

Prasthutha|

ಬೆಂಗಳೂರು: ಬೆಳಗಾವಿಯ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಸಿಲುಕಿ ರಾಜೀನಾಮೆ ನೀಡಲಿರುವ ಸಚಿವ ಕೆ ಎಸ್ ಈಶ್ವರಪ್ಪ ಮತ್ತೆ ಸಚಿರಾಗಲಿದ್ದಾರೆ ಎಂದು ಮಾಜಿ ಸಿಎಂ ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

- Advertisement -

ಶಿವಮೊಗ್ಗದಲ್ಲಿ ಮಾತಾಡಿದ ಅವರು, ಯಾವುದೇ ತಪ್ಪು ಮಾಡದ ಈಶ್ವರಪ್ಪ ಅವರು ಅನಿವಾರ್ಯವಾಗಿ ರಾಜಿನಾಮೆ ನೀಡುವ ಪರಿಸ್ಥಿತಿ ಬಂದಿದೆ. ಎರಡು ಮೂರು ತಿಂಗಳಲ್ಲಿ ತನಿಖೆ ಪೂರ್ಣ ಮಾಡಿದರೆ ಈಶ್ವರಪ್ಪ ಅವರು ನಿರಪರಾಧಿ ಎಂಬುದು ತಿಳಿಯಲಿದೆ. ಅವರು ಮತ್ತೆ ಸಚಿವ ಸಂಪುಟಕ್ಕೆ ಸೇರಲು ಯಾವುದೇ ಅಡ್ಡಿ ಇರುವುದಿಲ್ಲ ಎಂದು ಹೇಳಿದರು.

ಅಪರಾಧ ಮಾಡದೇ ಇದ್ದರೂ ರಾಜೀನಾಮೆ ನೀಡಬೇಕಾಯಿತು. ಇದನ್ನು ಎದುರಿಸಿ ಈ ಪ್ರಕರಣದಿಂದ ಹೊರಬಂದು ಮತ್ತೆ ಅವರು ಸಚಿವರಾಗಲಿದ್ದಾರೆ. ತನಿಖೆ ಮುಗಿದ ಬಳಿಕ ಈಶ್ವರಪ್ಪ‌ ಅವರು ನಿರ್ದೋಷಿ ಎಂಬುದು ಸ್ಪಷ್ಟವಾಗಲಿದೆ ಎಂದು ಯಡಿಯೂರಪ್ಪ ಹೇಳಿದರು.

Join Whatsapp