ಕೈ ಕೊಟ್ಟ ಕರೆಂಟ್ : ಅಕ್ಕನ ಬದಲಿಗೆ ತಂಗಿಗೆ ತಾಳಿ ಕಟ್ಟಿದ ವರ

Prasthutha|

ರಾಜಸ್ಥಾನ: ರಾತ್ರಿ ವೇಳೆ ನಡೆಯುತ್ತಿದ್ದ ಮದುವೆ ಸಮಾರಂಭವೊಂದರಲ್ಲಿ ವಿದ್ಯುತ್ ಕಡಿತಗೊಂಡು ವಧುಗಳಿಬ್ಬರು ಅದಲು-ಬದಲು ಆಗಿ ಯಡವಟ್ಟಾಗಿರುವ ಘಟನೆ ರಾಜಸ್ಥಾನದ ಉಜ್ಜೈನಿಯಲ್ಲಿ ನಡೆದಿದೆ. ರಾಜಸ್ಥಾನದ ಅಸ್ಲಾನಾ ಗ್ರಾಮದಲ್ಲಿ‌ ಮದುವೆ ಸಮಾರಂಭದಲ್ಲಿ ವಿದ್ಯುತ್ ಕೈಕೊಟ್ಟಿದ್ದು ಪೂಜೆ ಪ್ರಾರಂಭಿಸಿ ಸಪ್ತಪದಿ ತುಳಿಯುವ ವೇಳೆ ಎರಡು ಜೋಡಿಗಳಿದ್ದ ಕಾರಣ ವಧುಗಳು ಅದಲು-ಬದಲಾಗಿದ್ದಾರೆ.

- Advertisement -

ರಮೇಶ್ ಲಾಲ್ ಅವರ ಇಬ್ಬರು ಪುತ್ರಿಯರಾದ ನಿಕಿತಾ ಮತ್ತು ಕರಿಷ್ಮಾ ಅವರು ವಿವಿಧ ಕುಟುಂಬಗಳ ಇಬ್ಬರು ಯುವಕರಾದ ದಂಗ್ವಾರ ಭೋಲಾ ಮತ್ತು ಗಣೇಶ್ ಅವರನ್ನು ವಿವಾಹವಾಗುತ್ತಿದ್ದರು. ವಧುಗಳು ಮುಸುಕಿನಲ್ಲಿ ಇದ್ದುದರಿಂದ ಮತ್ತು ಯಾವುದೇ ವಿದ್ಯುತ್ ಇಲ್ಲದ ಕಾರಣ, ಇಬ್ಬರೂ ವಧುಗಳ ಉಡುಗೆ ಒಂದೇ ಆಗಿರುವುದರಿಂದ  ಈ ಘಟನೆಯು ನಡೆದಿದೆ ಎನ್ನಲಾಗಿದೆ.  ಮದುವೆಯ ಆಚರಣೆಗಳ ಸಮಯದಲ್ಲಿ ಅದಲು ಬದಲಾದ ಬಗ್ಗೆ ಯಾರಿಗೂ ತಿಳಿದಿರಲಿಲ್ಲ

ವರರು ತಮ್ಮ ವಧುಗಳನ್ನು ಮನೆಗೆ ಕರೆದೊಯ್ದಾಗ ವಿಷಯವು ಬೆಳಕಿಗೆ ಬಂದಿದ್ದು ಸಣ್ಣ ವಿವಾದದ ನಂತರ ಮತ್ತೇ ಜೋಡಿಗಳನ್ನು ಸರಿಪಡಿಸಲಾಯಿತು. ಆ ಮೇಲೆ ಹೊಸ ಪ್ರತಿಜ್ಞೆಯ ಮೂಲಕ ಜೋಡಿಗಳು ತಮ್ಮ ತಮ್ಮ ವರರನ್ನು ಕೈಹಿಡಿದರು.

Join Whatsapp