ಲೋಕಸಭೆ ಚುನಾವಣೆ ಮುಗಿದ ಬಳಿಕ ರಾಜ್ಯ ವಿಧಾನಸಭೆ ಚುನಾವಣೆ: ನಳಿನ್ ಕುಮಾರ್

Prasthutha|

- Advertisement -

ಮಂಗಳೂರು: ಲೋಕಸಭೆ ಚುನಾವಣೆ ಮುಗಿದ ಆರು ತಿಂಗಳಲ್ಲೇ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ ಎಂದು ನಮಗೆ ನೂರಕ್ಕೆ ನೂರು ವಿಶ್ವಾಸವಿದೆ ಎಂದು ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಭವಿಷ್ಯ ನುಡಿದಿದ್ದಾರೆ.

ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ‌ ಅವರು, ‘ಹಿಂದೆಂದಿಗಿಂತ ಹೆಚ್ಚಿನ ಅಂತರದಲ್ಲಿ ಬ್ರಿಜೇಶ್​ ಚೌಟರನ್ನು ಗೆಲ್ಲಿಸುತ್ತೇವೆ ಎಂದು ಹೇಳಿದರು.

- Advertisement -

ಈಶ್ವರಪ್ಪ ಬಂಡಾಯ ಸರಿಯಾಗುತ್ತದೆ. ರಾಜಕೀಯ ಪಾರ್ಟಿಯಲ್ಲಿ ಇದೆಲ್ಲಾ ಇರುವಂತಹದ್ದೇ.‌ ನಮ್ಮಲ್ಲಿ ಎಲ್ಲಾ ಕಾರ್ಯಕರ್ತರ ಮನಸ್ಸು ಒಂದೇ ರೀತಿಯಿದೆ.‌ ಮೋದಿಯವರ ಗೆಲುವಿಗಾಗಿ ನಾವು ಪರಿಶ್ರಮ ಪಡುತ್ತಿದ್ದೇವೆ ಎಂದರು.

Join Whatsapp