ಸಾಲ ವಾಪಸ್ ಕೇಳಿದ ವೃದ್ಧನನ್ನು ಬ್ಯಾಟ್ ನಿಂದ ಹೊಡೆದು ಕೊಲೆ

Prasthutha|

ಬೆಂಗಳೂರು: ಸಾಲ ವಾಪಸ್ ಕೇಳಿದ್ದಕ್ಕೆ ಆಕ್ರೋಶಗೊಂಡು ವೃದ್ಧರೊಬ್ಬರನ್ನು ಬ್ಯಾಟ್ ನಿಂದ ಹೊಡೆದು ಕೊಲೆ ಮಾಡಿರುವ ಘಟನೆ ಮುನ್ನೆಕೊಳಲು ಸಮೀಪದ ಜೆಆರ್ ಎಂ ಪರ್ಲ್ ಅಪಾರ್ಟ್ ಮೆಂಟ್ ನಲ್ಲಿ ನಡೆದಿದೆ.

- Advertisement -

ಮುನ್ನೆಕೊಳಲುವಿನ ವೆಂಕಟೇಶಪ್ಪ (65) ಕೊಲೆಯಾದ ವ್ಯಕ್ತಿ. ಆಪ್ತರಾದ ಶಿವಪ್ಪ ಅಲಿಯಾಸ್ ಮೇಷ್ಟ್ರು ಎನ್ನುವವರಿಗೆ ನಂಜುಂಡರೆಡ್ಡಿ ಹಾಗೂ ಪ್ರಕಾಶ್ ಅವರಿಂದ ವೆಂಕಟೇಶಪ್ಪ ಸಾಲ ಕೊಡಿಸಿದ್ದರು. ಸಾಲಕ್ಕೆ ಸಂಬಂಧಿಸಿದಂತೆ ಶಿವಪ್ಪ ನೀಡಿದ್ದ ಚೆಕ್ ಬೌನ್ಸ್ ಆಗಿತ್ತು. ಇದನ್ನು ಕೇಳಲೆಂದು ವೆಂಕಟೇಶಪ್ಪ ಸಾಲಗಾರರೊಂದಿಗೆ ಶಿವಪ್ಪನ ಅಪಾರ್ಟ್ ಮೆಂಟ್ ಬಳಿ ಬಂದಿದ್ದರು.

ಈ ವೇಳೆ ಕೋಪಗೊಂಡ ಶಿವಪ್ಪ ಬ್ಯಾಟ್ ನಿಂದ ಹೊಡೆದು ವೆಂಕಟೇಶಪ್ಪ ಅವರನ್ನು ಕೊಲೆ ಮಾಡಿ ಪರಾರಿಯಾಗಿದ್ದಾನೆ .

- Advertisement -

ಸುದ್ದಿ ತಿಳಿದ ತಕ್ಷಣವೇ ಸ್ಥಳಕ್ಕೆ ಮಾರತ್ ಹಳ್ಳಿ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿ  ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ವಕೈಗೊಂಡಿದ್ದಾರೆ.  ಹತ್ಯೆಯ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Join Whatsapp