ಇಂದು ಚಂದ್ರ ದರ್ಶನವಾಗದ ಹಿನ್ನೆಲೆ | ಕರಾವಳಿಯಲ್ಲಿ ಗುರುವಾರ ಈದ್ ಉಲ್ ಫಿತ್ರ್ ಆಚರಣೆಗೆ ಖಾಝಿ ಕರೆ

Prasthutha|

ಮಂಗಳೂರು : ಇಂದು ಚಂದ್ರದರ್ಶನವಾಗದ ಹಿನ್ನೆಲೆಯಲ್ಲಿ ಗುರುವಾರ ಈದ್ ಉಲ್ ಫಿತ್ರ್ ಆಚರಿಸುವಂತೆ ದಕ್ಷಿಣ ಕನ್ನಡ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ತಿಳಿಸಿದ್ದಾರೆ. ಈ ಮೂಲಕ ಮುಸ್ಲಿಂ ಬಾಂಧವರು ರಮಝಾನ್ ತಿಂಗಳ ಸಂಪೂರ್ಣ ಮೂವತ್ತನೇ ಉಪವಾಸವನ್ನು ಬುಧವಾರ ಪೂರ್ತಿಗೊಳಿಸಿ ಗುರುವಾರ ಸರಳ ರೀತಿಯಲ್ಲಿ ಈದ್ ಹಬ್ಬ ಆಚರಿಸುವಂತೆ ವಿನಂತಿಸಿದ್ದಾರೆ.

- Advertisement -

ಸರಕಾರ ಹಾಗೂ ಜಿಲ್ಲಾಡಳಿತ ದ ಮಾರ್ಗಸೂಚಿ ಅನುಸರಿಸಿ, ಕೊರೋನಾ ವಿರುದ್ದದ ಜಾಗೃತಿಯಲ್ಲಿ ಎಲ್ಲರೂ ಕೈ ಜೋಡಿಸಿ ಸರಳವಾಗಿ ಈದುಲ್ ಫಿತರ್ ಹಬ್ಬ ಆಚರಿಸುವಂತೆ,ಖಾಝಿ ಉಸ್ತಾದರವರು ಕರೆ ನೀಡಿರುತ್ತಾರೆ.

Join Whatsapp