ದಸರಾ ಮಹೋತ್ಸವದ ಗಜಪಡೆ ಪಯಣಕ್ಕೆ ಚಾಲನೆ: ಸೆ.16 ರಂದು ಅರಮನೆ ಪ್ರವೇಶ

Prasthutha|

ಬೆಂಗಳೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವವನ್ನು ಸರಳ ಮತ್ತು ಸಾಂಪ್ರದಾಯಿಕವಾಗಿ ಆಚರಿಸಲು ಸರ್ಕಾರ ಮುಂದಾಗಿದ್ದು, ಇಂದು ಗಜಪಡೆ ಪಯಣಕ್ಕೆ ಚಾಲನೆ ದೊರೆತಿದೆ.

- Advertisement -


ಹುಣಸೂರಿನ ವೀರನಹೊಸಹಳ್ಳಿಯಿಂದ ಗಜಪಯಣ ಆರಂಭಗೊಂಡಿದೆ. ಸಂಸದ ಪ್ರತಾಪ ಸಿಂಹ ಅವರು ಗಜಪಡೆಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು. ಜಂಬೂಸವಾರಿ ಮೆರವಣಿಗೆ ಮುಂದಾಳತ್ವ ವಹಿಸಲಿರುವ 56 ವರ್ಷದ ಅಭಿಮನ್ಯು ನೇತೃತ್ವದ 8 ಆನೆಗಳು ಕಾಡಿನಿಂದ ನಾಡಿನತ್ತ ಹೆಜ್ಜೆ ಹಾಕಿವೆ.


ಇಂದು ಸಂಜೆ ಲಾರಿ ಮೂಲಕ ಮೈಸೂರಿನ ಅಶೋಕಪುರಂ ಅರಣ್ಯ ಭವನಕ್ಕೆ ಗಜಪಡೆ ಆಗಮಿಸಿದ್ದು, ಸೆಪ್ಪಂಬರ್ 16 ರಂದು ಅರಮನೆಗೆ ಗಜಪಡೆ ಪ್ರವೇಶವಾಗಲಿವೆ. ಈ ವೇಳೆ ಜಿಲ್ಲಾಡಳಿತ ವತಿಯಿಂದ ಗಜಪಡೆಗೆ ಸಾಂಪ್ರದಾಯಕ ಪೂಜೆ ಸಲ್ಲಿಸಿ, ಸ್ವಾಗತಿಸಲಾಗುತ್ತದೆ. ಈ ಬಾರಿ ದಸರಾ ಮಹೋತ್ಸವ ಅಕ್ಟೋಬರ್ 7ರಿಂದ 15ರವರೆಗೆ ನಡೆಯಲಿದೆ.

Join Whatsapp