ಮಂಗಳೂರು: ಸ್ನೇಹಿತನ ಕೊಲೆಯಲ್ಲಿ ಅಂತ್ಯವಾಯ್ತು ‘ದಸರಾ ಪಾರ್ಟಿ’!

Prasthutha|

ಮಂಗಳೂರು: ದಸರಾ ಹಬ್ಬದ ಕೊನೆ ದಿನವಾದ ನಿನ್ನೆ ನಗರದ ಲಾಡ್ಜ್ ವೊಂದರಲ್ಲಿ ಪಾರ್ಟಿ ಆಯೋಜಿಸಿದ್ದ ಸ್ನೇಹಿತರ ಗುಂಪೊಂದು, ಕ್ಷುಲ್ಲಕ ಕಾರಣಕ್ಕೆ ಜಗಳವಾಡಿ ಓರ್ವನ ಕೊಲೆಯಲ್ಲಿ ಅಂತ್ಯವಾದ ಘಟನೆ ನಡೆದಿದೆ.

- Advertisement -


ನಗರದ ಪಂಪ್ವೆಲ್ ನ ಸಾಯಿ ಪ್ಯಾಲೇಸ್ ಲಾಡ್ಜ್ ನಲ್ಲಿ ಸೇರಿದ್ದ ಆರು ಮಂದಿ ಸ್ನೇಹಿತರು, ‘ಮಂಗಳೂರು ದಸರಾ’ ವನ್ನು ವೀಕ್ಷಿಸಿಕೊಂಡು ಆ ಬಳಿಕ ಮೋಜು ಮಸ್ತಿ ಮಾಡುವ ಉದ್ದೇಶದಿಂದ ಅಲ್ಲಿ ಸೇರಿದ್ದರು ಎನ್ನಲಾಗಿದೆ. ತಡರಾತ್ರಿವರೆಗೂ ಪಾರ್ಟಿಯಲ್ಲಿ ನಿರತರಾಗಿದ್ದ ಅವರ ನಡುವೆ ಇದ್ದ ಸುರತ್ಕಲ್ ನಿವಾಸಿ ಜೇಸನ್ ಹಾಗೂ ಪಚ್ಚನಾಡಿ ನಿವಾಸಿ ಧನುಷ್ (20) ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳವೆದ್ದಿದೆ ಎನ್ನಲಾಗಿದೆ. ಈ ವೇಳೆ ಕುಪಿತನಾದ ಜೇಸನ್ ತನ್ನಲ್ಲಿದ್ದ ಹರಿತವಾದ ಆಯುಧವೊಂದರಿಂದ ಧನುಷ್ ಎದೆ ಭಾಗಕ್ಕೆ ಬಲವಾಗಿ ಚುಚ್ಚಿದ್ದು ತೀವ್ರ ಗಾಯಗೊಂಡಿದ್ದಾನೆ. ತಕ್ಷಣವೇ ಆತನನ್ನು ಸ್ಥಳೀಯ ಇಂಡಿಯಾನ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲು ಕರೆದೊಯ್ದಿದ್ದು, ಆದರೆ ಆತ ಅದಾಗಲೇ ಮೃತಪಟ್ಟಿದ್ದಾಗಿ ತಿಳಿದು ಬಂದಿದೆ.


ಪಾರ್ಟಿ ಸಮಯದಲ್ಲಿ ಒಟ್ಟು ಆರು ಮಂದಿಯಿದ್ದು, ಉಳಿದಂತೆ ಪ್ರಮೀತ್, ಕಾರ್ತಿಕ್, ದುರ್ಗೇಶ್ ಹಾಗೂ ಪ್ರಜ್ವಲ್ ಎಂಬವರು ಹಾಜರಿದ್ದುದ್ದಾಗಿ ತಿಳಿದು ಬಂದಿದೆ. ಈ ಸಂಬಂಧ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Join Whatsapp