ಬಸ್ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಭಾರತೀಯ ವಿದ್ಯಾರ್ಥಿಗೆ ₹11 ಕೋಟಿ ಪರಿಹಾರ ನೀಡಲು ದುಬೈ ನ್ಯಾಯಾಲಯ ಆದೇಶ

Prasthutha|

ದುಬೈ: 2019ರಲ್ಲಿ ದುಬೈನಲ್ಲಿ ನಡೆದ ಬಸ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಭಾರತೀಯ ವಿದ್ಯಾರ್ಥಿಗೆ 11 ಕೋಟಿ ರೂ. (50 ಲಕ್ಷ ದಿರ್ಹಂ) ಪರಿಹಾರ ನೀಡಲು ದುಬೈ ಕೋರ್ಟ್ ಆದೇಶಿಸಿದೆ.

- Advertisement -

ಒಮಾನ್‌ನಿಂದ ದುಬೈಗೆ ವಿವಿಧ ದೇಶಗಳ 31 ಪ್ರಯಾಣಿಕರೊಂದಿಗೆ ತೆರಳುತ್ತಿದ್ದ ಬಸ್ ರಾಶಿದಿಯಾದಲ್ಲಿ ಭೀಕರವಾಗಿ ಅಪಘಾತಕ್ಕೀಡಾಗಿತ್ತು.

ಈ ಅಪಘಾತದಲ್ಲಿ 17 ಪ್ರಯಾಣಿಕರು ಸಾವನ್ನಪ್ಪಿದ್ದರು.
ಹೈದರಾಬಾದ್ ಮೂಲದ, ಯುಎಇ ರಾಸಲ್ ಖೈಮಾದಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದ ಮೊಹಮ್ಮದ್ ಬೇಗ್ ಮಿರ್ಜಾ ಎಂಬ ಯುವಕ ಗಂಭೀರ ಗಾಯಗೊಂಡಿದ್ದು, ವಿದ್ಯಾರ್ಥಿಗೆ 11 ಕೋಟಿ ರೂ. ಪರಿಹಾರ ನೀಡಲು ನ್ಯಾಯಾಲಯ ಆದೇಶಿಸಿದೆ.

- Advertisement -

ಮಿರ್ಜಾ ಅವರ ಮೆದುಳಿಗೆ ಶೇಕಡಾ 50 ರಷ್ಟು ಶಾಶ್ವತ ಹಾನಿಯಾಗಿದೆ ಎಂದು ನ್ಯಾಯಾಲಯವು ಪರಿಹಾರವನ್ನು ಪಾವತಿಸುವಂತೆ ವಿಮಾ ಕಂಪನಿಗೆ ಸೂಚಿಸಿದೆ.

ಯುಎಇಯ ಇತಿಹಾಸದಲ್ಲೇ ಭಾರತೀಯನೊಬ್ಬ ಪಡೆಯುತ್ತಿರುವ ಅತಿ ದೊಡ್ಡ ವಾಹನ ಅಪಘಾತ ಪರಿಹಾರ ಇದಾಗಿದೆ ಎಂದು ಹೇಳಲಾಗುತ್ತಿದೆ.

Join Whatsapp